ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಗಳು, ‘ಪರೀಕ್ಷಾರ್ಥಿಗಳನ್ನು ಅತಿಯಾದ ಒತ್ತಡಕ್ಕೆ ಸಿಲುಕಿಸುತ್ತಿವೆ’ಎಂದು ಚತ್ತೀಸ್ಗಡ್ ಕೇಡರ್ನ ಐಎಎಸ್ ಅಧಿಕಾರಿ ಅವನೀಶ್ಶರಣ್ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ ರಾಜೇಂದ್ರ ನಗರದಲ್ಲಿ ಯುಪಿಎಸ್ಸಿ ಪರೀಕ್ಷಾರ್ಥಿ ಯುವತಿಯೊಬ್ಬರು ಆತ್ಯಹತ್ಯೆ ಮಾಡಿಕೊಂಡಿದ್ದರ ಪಿಟಿಐ ವರದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಅವನೀಶ್ಈ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ ರಾಜೇಂದ್ರ ನಗರದ 25 ವರ್ಷದ ಯುವತಿ ಆಕಾಂಕ್ಷಾ ಮಿಶ್ರಾ ಎನ್ನುವರು ತಮ್ಮ ಕೋಣೆಯಲ್ಲಿ ನೇಣು ಬಿಗಿದು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಯುಪಿಎಸ್ಸಿ ಪರೀಕ್ಷಾರ್ಥಿಯಾಗಿದ್ದ ಅವರ ಆತ್ಮಹತ್ಯೆಗೆ ಅತಿಯಾದ ಒತ್ತಡವೇ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದರು.
ಈ ಸುದ್ದಿಯನ್ನು ಹಂಚಿಕೊಂಡಿರುವ ಅವನೀಶ್ಶರಣ್ ಅವರು, ‘ಯುಪಿಎಸ್ಸಿ ಪರೀಕ್ಷೆಗಳು ಪರೀಕ್ಷಾರ್ಥಿಗಳನ್ನು ಅತಿಯಾದ ಒತ್ತಡಕ್ಕೆ ಸಿಲುಕಿಸುತ್ತವೆಎಂಬುದನ್ನು ನಾನು ಖಂಡಿತವಾಗಿಯೂ ನಂಬುತ್ತೇನೆ ಎಂಬಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಟ್ವೀಟ್ಗೆ ಅನೇಕರು ಬೆಂಬಲಿಸಿ, ಯುಪಿಎಸ್ಸಿ ಪರೀಕ್ಷೆಗಳು ತುಂಬಾ ಕಠಿಣ ಇರುವುದರಿಂದ ಇಂದು ಅನೇಕ ಪರೀಕ್ಷಾರ್ಥಿಗಳು ತೀವ್ರ ಒತ್ತಡಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ’ಎಂಬ ಅಭಿಪ್ರಾಯಪಟ್ಟಿದ್ದಾರೆ.
‘ಯುಪಿಎಸ್ಸಿ ಪರೀಕ್ಷೆಗಳೇ ಅಂತಿಮವಲ್ಲ. ಬದುಕು ದೊಡ್ಡದಿದೆ. ಪರೀಕ್ಷಾರ್ಥಿಗಳಿಗೆ ಆಪ್ತ ಸಮಾಲೋಚನೆ ಅಗತ್ಯ ಎಂದು ಹಲವು ಜನ ಅಭಿಪ್ರಾಯಪಟ್ಟಿದ್ದಾರೆ.
ಅವನೀಶ್ಶರಣ್ ಅವರು 2009 ರ ಬ್ಯಾಚ್ ನ ಐಎಎಸ್ ಅಧಿಕಾರಿ. ಸದ್ಯ ಚತ್ತೀಸ್ಗಡ್ದಲ್ಲಿಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರು ತಮ್ಮಇಂಟರ್ ಮೀಡಿಯೆಟ್ (ಎಸ್ಎಸ್ಎಲ್ಸಿ)ಪರೀಕ್ಷೆಯಲ್ಲಿ ಕೇವಲ ಶೇ 44 ಅಂಕಗಳನ್ನು ಪಡೆದು, ಮುಂದೆ ಐಎಎಸ್ ಪರೀಕ್ಷೆ ತೇರ್ಗಡೆಯಾಗಿದ್ದರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.