ADVERTISEMENT

ಉತ್ತರ ಪ್ರದೇಶ: ಮುಖ್ಯಮಂತ್ರಿ ಆದಿತ್ಯನಾಥ ಅವರಿಗೆ ರಾಖಿ ಕಟ್ಟಿದ ರಾಜ್ಯಪಾಲೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 11:45 IST
Last Updated 15 ಆಗಸ್ಟ್ 2019, 11:45 IST
   

ಲಖನೌ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರು ರಕ್ಷಾ ಬಂಧನ ದಿನವಾದ ಇಂದು(ಗುರುವಾರ) ರಾಖಿ ಕಟ್ಟಿದರು.

ಹಣೆಯ ಮೇಲೆ ತಿಲಕ ಇಟ್ಟ ಪಟೇಲ್‌ಮುಖ್ಯಮಂತ್ರಿಗೆ ಶುಭಕೋರಿದರು. ಈ ವೇಳೆ ಯೋಗಿ ಅವರು ರಾಜ್ಯಪಾಲೆಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು.

ಇದಕ್ಕೂ ಮೊದಲು ಯೋಗಿ ಲಖನೌನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ ದಿನ ಆಚರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.