ADVERTISEMENT

ರಾಜಕೀಯ ಪಕ್ಷಗಳ ಪತ್ರಿಕೆಗಳಿಂದ ಪಟ್ಟಭದ್ರ ಹಿತಾಸಕ್ತಿಗೆ ಉತ್ತೇಜನ: ನಾಯ್ಡು

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಂದು ಉಪರಾಷ್ಟ್ರಪತಿ ಹೇಳಿಕೆ

ಪಿಟಿಐ
Published 16 ನವೆಂಬರ್ 2019, 13:47 IST
Last Updated 16 ನವೆಂಬರ್ 2019, 13:47 IST
ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಕೌನ್ಸಿಲ್‌ ಅಧ್ಯಕ್ಷ, ನ್ಯಾಯಮುರ್ತಿ ಸಿ.ಕೆ.ಪ್ರಸಾದ್‌ ಸ್ವಾಗತಿಸಿದರು    –ಪಿಟಿಐ ಚಿತ್ರ
ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಮಾರಂಭಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಕೌನ್ಸಿಲ್‌ ಅಧ್ಯಕ್ಷ, ನ್ಯಾಯಮುರ್ತಿ ಸಿ.ಕೆ.ಪ್ರಸಾದ್‌ ಸ್ವಾಗತಿಸಿದರು    –ಪಿಟಿಐ ಚಿತ್ರ   

ನವದೆಹಲಿ: ‘ರಾಜಕೀಯ ಪಕ್ಷಗಳು, ಉದ್ದಿಮೆದಾರರು ತಮ್ಮದೇ ಆದ ಪತ್ರಿಕೆಗಳನ್ನು ಮತ್ತು ಸುದ್ದಿ ವಾಹಿನಿಗಳನ್ನು ಪ್ರಾರಂಭಿಸುತ್ತಿದ್ದಾರೆ. ಇದರಿಂದ ಪಟ್ಟಭದ್ರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ಪತ್ರಿಕೋದ್ಯಮದ ಮೌಲ್ಯಗಳನ್ನು ರಾಜಿ ಮಾಡಿಕೊಳ್ಳುತ್ತಿವೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.

ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಪಕ್ಷವೊಂದು ಪತ್ರಿಕೆ ನಡೆಸುತ್ತಿದ್ದರೆ, ಅದನ್ನು ಸ್ಪಷ್ಟವಾಗಿ ತಿಳಿಸಬೇಕು' ಎಂದು ಹೇಳಿದ ಅವರು, ‘ಸಂವೇದನಾಶೀಲ ಸುದ್ದಿ ನೀಡುವ ಸಂದರ್ಭದಲ್ಲಿ ಪತ್ರಕರ್ತರು ಎಚ್ಚರಿಕೆಯಿಂದ ವರ್ತಿಸಬೇಕು. ಈಗಿನ ಸಂದರ್ಭದಲ್ಲಿ ಸಂವೇದನಾಶೀಲ ಸುದ್ದಿ ಎಂದರೆ ಅರ್ಥವಿಲ್ಲದ ಸುದ್ದಿ ಎಂಬಂತಾಗಿದೆ’ ಎಂದರು.

ADVERTISEMENT

‘ಪತ್ರಿಕಾ ಸ್ವಾತಂತ್ರ್ಯ ಮತ್ತು ಅದರ ಜವಾಬ್ದಾರಿ ಏನೆಂಬುವುದನ್ನು ಅರ್ಥ ಮಾಡಿಕೊಳ್ಳುವ ದಿನ ಇದು. ಕಾಸಿಗಾಗಿ ಸುದ್ದಿಗಳಿಗಿಂತ ನಕಲಿ ಸುದ್ದಿಗಳು ದೊಡ್ಡ ಬಿಕ್ಕಟ್ಟು ಸೃಷ್ಟಿಸುತ್ತವೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.