ADVERTISEMENT

ಸುಳ್ಳಿನ ಆಧಾರದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಟೀಕೆ: ಪಿತ್ರೋಡಾ

ಪಿಟಿಐ
Published 14 ಮಾರ್ಚ್ 2023, 14:47 IST
Last Updated 14 ಮಾರ್ಚ್ 2023, 14:47 IST
ಸ್ಯಾಮ್‌ ಪಿತ್ರೋಡಾ
ಸ್ಯಾಮ್‌ ಪಿತ್ರೋಡಾ   

ನವದೆಹಲಿ: ‘ಬಿಜೆಪಿಯವರು ಸುಳ್ಳನ್ನೇ ದಾಳವಾಗಿಸಿಕೊಂಡು ರಾಹುಲ್‌ ಗಾಂಧಿ ವಿರುದ್ಧ ವ್ಯವಸ್ಥಿತ ದಾಳಿ ನಡೆಸುತ್ತಿದ್ದಾರೆ’ ಎಂದು ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ದೂರಿದ್ದಾರೆ.

ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲ ರಚನೆಗೆ ಅಪಾಯ ಎದುರಾಗಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ್ದ ರಾಹುಲ್‌, ಅದರ ರಕ್ಷಣೆಗೆ ಯಾವ ರಾಷ್ಟ್ರದ ನೆರವನ್ನೂ ಕೋರಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಲಂಡನ್‌ನಲ್ಲಿ ನಡೆದಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಹುಲ್‌ ಮಾತನಾಡುವಾಗ ನೀವು ಅಲ್ಲಿದ್ದಿರೇ? ಅವರು ಮಾತನಾಡಿರುವ ವಿಡಿಯೊವನ್ನಾದರೂ ನೋಡಿದ್ದೀರಾ? ಅವರು ಏನು ಹೇಳಿದ್ದಾರೆ ಎಂಬುದು ನಿಮಗೆ ಗೊತ್ತಿದೆಯಾ? ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ, ಯಾವ ಸಂದೇಶ ನೀಡಿದ್ದಾರೆ ಎಂಬುದಾದರೂ ತಿಳಿದಿದೆಯೇ’ ಎಂದು ಪ್ರಶ್ನಿಸಿರುವ ಅವರು ‘ಅಪಪ್ರಚಾರ ಮಾಡುವುದನ್ನು ಮೊದಲು ನಿಲ್ಲಿಸಿ’ ಎಂದೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.