ADVERTISEMENT

ಉತ್ತರ ಪ್ರದೇಶ: ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಮೇಲೆ ರಾಸಾಯನಿಕ ಎರಚಲು ಯತ್ನ

ಪಿಟಿಐ
Published 1 ಫೆಬ್ರುವರಿ 2022, 16:16 IST
Last Updated 1 ಫೆಬ್ರುವರಿ 2022, 16:16 IST
ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್   

ಲಖನೌ: ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಕಚೇರಿಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಕಾಂಗ್ರೆಸ್ ಮುಖಂಡ ಕನ್ಹಯ್ಯಕುಮಾರ್ ಮೇಲೆ ರಾಸಾಯನಿಕ ಎರಚಲು ಯತ್ನಿಸಿದ್ದಾನೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆತ ಯಾವುದೇ ಹಾನಿ ಎಸಗುವ ಮುನ್ನವೇ ಪಕ್ಷದ ಪದಾಧಿಕಾರಿಗಳ ಕೈಗೆ ಸಿಕಿಬಿದ್ದಿದ್ದಾನೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಅಂಗವಾಗಿ ಯುಪಿಸಿಸಿ ಕಚೇರಿಯಲ್ಲಿ ಪಕ್ಷವು ಆಯೋಜಿಸಿದ್ದ 'ಯುವ ಸಂಸದ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಕನ್ಹಯ್ಯಆಗಮಿಸಿದ್ದರು.

ADVERTISEMENT

ರಾಸಾಯನಿಕ ಎರಚಲು ಯತ್ನಿಸಿದ ಯುವಕನನ್ನು ದೇವಾಂಶ್ ಬಾಜ್‌ಪೇಯಿ ಎಂದು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.