ಚಿಂಚೋಳಿ: ಬುಧವಾರ ಬೆಳಿಗ್ಗೆ 11ಕ್ಕೆ ಸಂಭವಿಸಿದ ಅಪಘಾತದಲ್ಲಿ ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ ಮತ್ತು ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಜನಾರ್ದನ್ ಯಂಪಳ್ಳಿ ಗಾಯಗೊಂಡಿದ್ದಾರೆ.
ತೆಲಂಗಾಣ ಗಡಿಯಲ್ಲಿರುವ ಕೊತ್ಲಾಪುರ ಗ್ರಾಮಕ್ಕೆ ತೆರಳುವಾಗ ತಾಲ್ಲೂಕಿನ ಪೋಲಕಪಳ್ಳಿ ಬಳಿ ಅಪಘಾತ ಸಂಭವಿಸಿದೆ. ಶಾಸಕರು ಪ್ರಯಾಣಿಸುತ್ತಿದ್ದ ವಾಹನ ಹಿಂಬಾಲಿಸುತ್ತಿದ್ದ ವಾಹನವೊಂದು ಶಾಸಕರ ವಾಹನ ಹಿಂದಿಕ್ಕಿ ಮುಂದಕ್ಕೆ ಹೋಗಲು ಯತ್ನಿಸಿದಾಗ ಎದುರಿಗೆ ಹಸುವೊಂದು ಬಂದಿದೆ. ವಾಹನ ಹಸುವಿಗೆ ಡಿಕ್ಕಿ ಹೊಡೆದು ನಂತರ ಶಾಸಕರ ವಾಹನಕ್ಕೆ ಗುದ್ದಿ ಮುಂದಕ್ಕೆ ಉರುಳಿದೆ.
ಈ ಅಪಘಾತದಲ್ಲಿ ಶಾಸಕರಿಗೆ ತಲೆಗೆ ಮತ್ತು ಎಡಗೈಗೆ ಪೆಟ್ಟಾಗಿದೆ.
ಸುದ್ದಿ ತಿಳಿದು ಭಾರಿ ಸಂಖ್ಯೆಯಲ್ಲಿ ಜನರು ಆಸ್ಪತ್ರೆ ಎದುರು ನೆರೆದಿದ್ದರು. ಡಾ. ಉಮೇಶ ಜಾಧವ್ ಅವರು ಎರಡು ದಶಕದ ಹಿಂದೆ ಸಂಭವಿಸಿದ ರೈಲು ಅಪಘಾತದಲ್ಲೂ ಗಾಯಗೊಂಡಿದ್ದರು. ಇಂದಿನ ಅಪಘಾತದಿಂದ ಅವರಿಗೆ ಒಳ ಪೆಟ್ಟು ಘಾಸಿ ಮಾಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.