ADVERTISEMENT

ಅಮ್ಮಿನಬಾವಿ ತಾ.ಪಂ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 5:27 IST
Last Updated 17 ಜೂನ್ 2018, 5:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಅಮ್ಮಿನಬಾವಿ ತಾಲ್ಲೂಕು ಪಂ‌ಚಾಯಿತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ದೇಸಾಯಿ ‌ಗೆಲುವು‌ ಸಾಧಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿದ್ದ ಸುಭಾಷ ದೇಸಾಯಿ ನಿಧನದ ಹಿನ್ನಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಸಹೋದರ ಸುರೇಂದ್ರ ದೇಸಾಯಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಇಳಿದು ಆಯ್ಕೆ ಆಗಿದ್ದಾರೆ.

ಸುರೇಂದ್ರ ಅವರಿಗೆ 2,130 ಮತಗಳು ಲಭಿಸಿವೆ.

ADVERTISEMENT

ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮುತ್ತಪ್ಪ ಹಣಸಿ 1,461 ಮತಗಳು, ಜೆಡಿಎಸ್‌ನ ವಿಜಯ ಕುಮಾರ ಬೊಬ್ಬಕ್ಜನವರ 303 ಮತಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.