ADVERTISEMENT

ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:37 IST
Last Updated 8 ಜೂನ್ 2018, 19:37 IST

ಬೆಂಗಳೂರು: ರಾಜ್ಯದ ಐವರು ಐಪಿಎಸ್‌ ಅಧಿಕಾರಿಗಳನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ನಗರ ಕಮಿಷನರ್‌ ಎಂ. ಚಂದ್ರಶೇಖರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಕಚೇರಿಗೆ, ಬಾಗಲಕೋಟೆ ಎಸ್ಪಿ ಸಿ. ವಂಶಿಕೃಷ್ಣ ಅವರನ್ನು ಎಸಿಬಿ ದಾವಣಗೆರೆ ವಲಯಕ್ಕೆ, ರೈಲ್ವೆ ಡಿಐಜಿ ಡಾ. ಡಿ.ಸಿ. ರಾಜಪ್ಪ ಅವರನ್ನು ಬೆಳಗಾವಿ ಕಮಿಷನರ್‌ ಆಗಿ, ಮಂಗಳೂರು ಪೊಲೀಸ್‌ ಕಮಿಷನರ್‌ ವಿಪುಲ್‌ ಕುಮಾರ್‌ ಅವರನ್ನು ಮೈಸೂರಿನ ಪೊಲೀಸ್‌ ತರಬೇತಿ ಅಕಾಡೆಮಿಗೆ, ಸಿ.ಬಿ ರಿಷ್ಯಂತ್‌ ಬಾಗಲಕೋಟೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT