ADVERTISEMENT

ಕೋಮು ಸೌಹಾರ್ದಕ್ಕೆ ವೇದಿಕೆಯಾದ ಮಳೆ!

​ಪ್ರಜಾವಾಣಿ ವಾರ್ತೆ
Published 30 ಮೇ 2018, 20:04 IST
Last Updated 30 ಮೇ 2018, 20:04 IST
ಮಂಗಳೂರಿನ ಲಾಲ್‌ಬಾಗ್‌ನಲ್ಲಿ ತೆಂಗು ಹಾಗೂ ಮಾವಿನ ಮರಗಳು ರಾಜಕಾಲುವೆಗೆ ಉರುಳಿವೆ
ಮಂಗಳೂರಿನ ಲಾಲ್‌ಬಾಗ್‌ನಲ್ಲಿ ತೆಂಗು ಹಾಗೂ ಮಾವಿನ ಮರಗಳು ರಾಜಕಾಲುವೆಗೆ ಉರುಳಿವೆ   

ಮಂಗಳೂರು: ಮಂಗಳವಾರ ಸುರಿದ ಮಳೆ ನಗರದಾದ್ಯಂತ ಭಾರಿ ಅನಾಹುತ ಸೃಷ್ಟಿಸಿದ್ದರೂ, ಕೋಮು ಸೌಹಾರ್ದವನ್ನು ಬಡಿದೆಬ್ಬಿಸುವಲ್ಲಿಯೂ ಯಶಸ್ವಿಯಾಗಿದೆ. ನಗರದ ದೇವಾಲಯವೊಂದರಲ್ಲಿ ಸೇರಿದ್ದ ನೀರನ್ನು ಹೊರತೆಗೆಯುವ ಮೂಲಕ ಸೌಹಾರ್ದ ಮೆರೆದ ಮುಸ್ಲಿಮ್‌ ಯುವಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಂಗಳವಾರ ಎಡೆಬಿಡದೇ ಸುರಿದ ಮಳೆಯಿಂದಾಗಿ ನಗರದ ಪಾಂಡೇಶ್ವರದ ಕೊರಗಜ್ಜನ ದೈವಸ್ಥಾನಕ್ಕೆ ನೀರು ನುಗ್ಗಿತ್ತು. ಈ ಸಂದರ್ಭದಲ್ಲಿ ದೈವಸ್ಥಾನದ ನೀರು ಹೊರಹಾಕಿ ಸ್ವಚ್ಛತೆಗೆ ಟೊಂಕ ಕಟ್ಟಿದವರು ಸ್ಥಳೀಯ ಮುಸ್ಲಿಮರು.

ಇನ್ನೊಂದೆಡೆ, ಸಂಘ ನಿಕೇತನದಲ್ಲಿ ಮಳೆಯ ಸಂತ್ರಸ್ತರಿಗೆ ಜಾತಿ, ಭೇದ ಎಣಿಸದೇ ಬಟ್ಟೆ, ಹಾಸಿಗೆ, ಊಟ, ವಸತಿ ಒದಗಿಸುವ ಮೂಲಕ ಸೌಹಾರ್ದದ ಕಾರ್ಯ ಮಾಡಲಾಯಿತು.

ADVERTISEMENT

ಎರ್ಮಾಯಿ ಫಾಲ್ಸ್‌ನಲ್ಲೂ ಸಹಕಾರ: ಉಜಿರೆ ಸಮೀಪದ ಎರ್ಮಾಯಿ ಫಾಲ್ಸ್‌ನಲ್ಲಿ ಮೃತಪಟ್ಟ ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ಕಟೀಲು ಮೃತದೇಹವನ್ನು ಎತ್ತುವ ಕಾರ್ಯದಲ್ಲಿ ಸ್ಥಳೀಯರ ಜತೆಗೆ ಕೆಲಸ ಮಾಡಿದವರು ಮೂವರು ಮುಸ್ಲಿಂ ಯುವಕರು.

ರಂಜಾನ್‌ ವ್ರತಾಚರಣೆಯಲ್ಲಿದ್ದ ಫಾರೂಕ್‌, ಸಲಾಂ ಹಾಗೂ ಬಾಬಾ ಆಂಬುಲೆನ್ಸ್‌ನ ಜಲೀಲ್‌ ಅವರು, ಸಂತೋಷ್‌ ಶೆಟ್ಟಿ ಅವರ ಮೃತ
ದೇಹವನ್ನು ಎತ್ತುವಲ್ಲಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.