ಗೋಣಿಕೊಪ್ಪಲು: ಕಾಫಿ ತೋಟದ ಕೆರೆಯ ಕೆಸರಿನಲ್ಲಿ ಹೂತು ಹೋಗಿದ್ದ ಕಾಡಾನೆ ಮರಿಯನ್ನು ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತೋಟದ ಕಾರ್ಮಿಕರು ಮೇಲೆತ್ತಿ ರಕ್ಷಿಸಿದರು.
ಸ್ಥಳದಲ್ಲಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಸಿಬ್ಬಂದಿ ಚದುರಿಸಿ ಹಗ್ಗದ ಸಹಾಯದಿಂದ ಮರಿಯಾನೆಯನ್ನು ಕೆಸರಿನಿಂದ ಮೇಲೆತ್ತಿದರು. ಕೆಲ ಸಮಯ ಮಲಗಿದಲ್ಲಿಯೇ ಇತ್ತು. ಬಳಿಕ ಸುಧಾರಿಸಿಕೊಂಡು ಅನತಿ ದೂರದಲ್ಲಿಯೇ ಇದ್ದ ತಾಯಿ ಬಳಿಗೆ ತೆರಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.