ADVERTISEMENT

ಬಿಜೆಪಿಗೆ ಹೊಸ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 8:00 IST
Last Updated 10 ಜುಲೈ 2012, 8:00 IST

ಬೆಂಗಳೂರು (ಪಿಟಿಐ): ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಅರ್ಧದಷ್ಟು ಪ್ರಮುಖ ಖಾತೆಗಳನ್ನು ತನ್ನ ಬಣದ ಶಾಸಕರಿಗೆ ನೀಡಬೇಕೆಂಬ ಬೇಡಿಕೆಯನ್ನು ಮುಂದಿಡುವ ಮೂಲಕ ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೊಸ ದಾಳ ಹಾಕಿದ್ದಾರೆ.

ಕೇಂದ್ರದ ವರಿಷ್ಠರು ಇಂದು ಕರೆದಿರುವ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ತನ್ನ ಬೇಡಿಕೆಗಳು ಈಡೇರಬೇಕೆಂಬ ಹೊಸ ಷರತ್ತನ್ನು ಮುಂದಿಟ್ಟು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ಜಾತಿ ಆಧರಿಸಿ ಮುಖ್ಯಮಂತ್ರಿ ಬದಲಾವಣೆ ಮಾಡಿರುವ ಬಿಜೆಪಿಯು ಪಕ್ಷವನ್ನು ಈ ಮಟ್ಟಕ್ಕೆ ತಂದ ಒಕ್ಕಲಿಗ ಹಾಗೂ ಕುರುಬ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸಾಮಾಜಿಕ ನ್ಯಾಯವನ್ನು ಬದಿಗಿಟ್ಟಿದೆ ಎಂದು ಸದಾನಂದಗೌಡ ಅವರ ಬಣ ಆರೋಪಿಸಿದೆ. ಈಗಾಗಲೇ ಒಕ್ಕಲಿಗ ಸಮುದಾಯವು ಡಿ.ವಿ.ಸದಾನಂದ ಗೌಡ ಅವರನ್ನು ಬಹಿರಂಗವಾಗಿ ಬೆಂಬಲಿಸಿದೆ. 

ADVERTISEMENT

ಈ ನಡುವೆ ಸದಾನಂದ ಗೌಡ ಬಣದಲ್ಲಿ ಗುರುತಿಸಿಕೊಂಡಿರುವ ಈಶ್ವರಪ್ಪ, ಬಾಲಚಂದ್ರ ಜಾರಕಿಹೊಳೆ ಹಾಗೂ ಎಸ್.ಸುರೇಶ್ ಕುಮಾರ್ ಅವರು ಬಲ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಪಕ್ಷದ ಶಾಸಕಾಂಗ ಸಭೆಗೆ ತೆರಳದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.