ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು, ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಯಳಂದೂರಿನಲ್ಲಿ 17 ಸೆಂ.ಮೀಮಳೆಯಾಗಿದೆ. ಚಾಮರಾಜನಗರ 11, ಶ್ರೀರಾಮಪುರ 10, ಬೆಳ್ತಂಗಡಿ, ಹೆಸರಘಟ್ಟ 9, ಬೆಳಗಾವಿ, ಅಜ್ಜಂಪುರ, ಶ್ರವಣಬೆಳಗೊಳ, ನೆಲಮಂಗಲ, ಚನ್ನಪಟ್ಟಣ 8, ಹಳ್ಳಿಮೈಸೂರು, ದೇವನಹಳ್ಳಿ, ಹೊಳಲ್ಕೆರೆ 7, ಕಾರ್ಕಳ, ಲಕ್ಷ್ಮೇಶ್ವರ, ಚನ್ನರಾಯಪಟ್ಟಣ, ಮಹದೇಶ್ವರಬೆಟ್ಟ, ಮಂಡ್ಯ, ರಾಯಲ್ಪಾಡು, ಹೊಸಕೋಟೆ, ಹಿರಿಯೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಬುಕ್ಕಾಪಟ್ಟಣ 6, ಧರ್ಮಸ್ಥಳ, ಪಣಂಬೂರು, ಹಳಿಯಾಳ, ಮದ್ದೂರು, ಸೋಮಪುರ, ಹೊಸದುರ್ಗ, ತಿಪಟೂರು, ಕುಣಿಗಲ್, ಮಧುಗಿರಿ, ಶಿರಾ, ರಾಮನಗರ 5, ಮೂಡುಬಿದಿರೆ, ಸುಬ್ರಹ್ಮಣ್ಯ, ಗುತ್ತಲ, ರಾಣೆಬೆನ್ನೂರು, ನರಗುಂದ, ಮಹಾಲಿಂಗಪುರ, ಕಳಸ, ಕಡೂರು, ಪಂಚನಹಳ್ಳಿ, ಮಳವಳ್ಳಿ, ಬೆಂಗಳೂರು ನಗರ, ದೊಡ್ಡಬಳ್ಳಾಪುರ, ದಾವಣಗೆರೆ, ತುಮಕೂರು, ಚಿಕ್ಕನಹಳ್ಳಿ 4, ಮಂಗಳೂರು ವಿಮಾನ ನಿಲ್ದಾಣ, ಬೆಳಗಾವಿ ವಿಮಾನ ನಿಲ್ದಾಣ ತಲಾ 3 ಸೆಂ.ಮೀ. ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.