ADVERTISEMENT

ರಾಹುಲ್‌ ರಾಜ್ಯ ಪ್ರವಾಸ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 20:12 IST
Last Updated 25 ಅಕ್ಟೋಬರ್ 2017, 20:12 IST
ರಾಹುಲ್‌ ರಾಜ್ಯ ಪ್ರವಾಸ ಮುಂದೂಡಿಕೆ
ರಾಹುಲ್‌ ರಾಜ್ಯ ಪ್ರವಾಸ ಮುಂದೂಡಿಕೆ   

ಬೆಂಗಳೂರು: ‘ನವೆಂಬರ್‌ 19ರಿಂದ ಮೂರು ದಿನ ನಿಗದಿಯಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ರಾಜ್ಯ ಪ್ರವಾಸವನ್ನು ಮುಂದೂಡಲಾಗಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

ಇದೇ 29ರಂದು ದೆಹಲಿಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ಹೆಸರು ಅಂತಿಮಗೊಳ್ಳಬಹುದು. ತಮ್ಮ ಅಜ್ಜಿ, ಇಂದಿರಾ ಗಾಂಧಿ ಜನ್ಮದಿನವಾದ ನ. 19ರಂದು ರಾಹುಲ್‌ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಚಿಕ್ಕಮಗಳೂರಿನಲ್ಲಿ ನ.19ರಂದು ನಡೆಯಲಿದ್ದ ಇಂದಿರಾ ಗಾಂದಿ ಜನ್ಮ ಶತಮಾನೋತ್ಸವ, 20ರಂದು ಶಿವಮೊಗ್ಗದಲ್ಲಿ ಪಕ್ಷದ ಸಮಾವೇಶ, 21ರಂದು ಕುಮಟಾದಲ್ಲಿ ಮೀನುಗಾರರ ರಾಜ್ಯಮಟ್ಟದ ಸಮಾವೇಶದಲ್ಲೂ ರಾಹುಲ್‌ ಭಾಷಣ ಮಾಡುವವರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.