ADVERTISEMENT

ಶ್ರೀರಾಮ ಸೇನೆಗೂ ಪರಶುರಾಮ ವಾಘ್ಮೋರೆಗೂ ಸಂಬಂಧವಿಲ್ಲ: ಮುತಾಲಿಕ್‌

ಏಜೆನ್ಸೀಸ್
Published 16 ಜೂನ್ 2018, 11:14 IST
Last Updated 16 ಜೂನ್ 2018, 11:14 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ಬಂಧಿಸಿರುವ ಪರಶುರಾಮ ವಾಘ್ಮೋರೆಗೂ ಮತ್ತು ಶ್ರೀರಾಮ ಸೇನೆಗೂ ಸಂಬಂಧವಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಹೇಳಿದ್ದಾರೆ.

‘ಶ್ರೀರಾಮ ಸೇನೆಗೂ ಪರಶುರಾಮಗು ಸಂಬಂಧವಿಲ್ಲ. ಅವರು ಎಸ್‌ಐಟಿ ಮುಂದೆ ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನ್ನ ಜತೆ ಹಲವು ಜನ ಫೋಟೊ ತೆಗೆಸಿಕೊಂಡಿದ್ದಾರೆ. ಬರಿ ನನ್ನ ಜತೆ ಫೋಟೊ ತೆಗೆಸಿಕೊಂಡ ಮಾತ್ರಕ್ಕೆ ಅವರು ನಮ್ಮ ಕಾರ್ಯಕರ್ತ ಎಂದು ಹೇಳಲಾಗದು’ ಎಂದು ಪ್ರಮೋದ್‌ ಮುತಾಲಿಕ್‌ ‍ಹೇಳಿದ್ದಾರೆ ಎಂದು ಶನಿವಾರ ಎಎನ್‌ಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT