ADVERTISEMENT

ಸಾಣೇಹಳ್ಳಿ ಸ್ವಾಮೀಜಿಗೆ ರಂಗಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಸಾಣೇಹಳ್ಳಿ ಸ್ವಾಮೀಜಿಗೆ  ರಂಗಪುರಸ್ಕಾರ
ಸಾಣೇಹಳ್ಳಿ ಸ್ವಾಮೀಜಿಗೆ ರಂಗಪುರಸ್ಕಾರ   

ಬಳ್ಳಾರಿ: ಇಲ್ಲಿನ ರಂಗತೋರಣ ಸಂಸ್ಥೆಯ ‘ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗಪುರಸ್ಕಾರ’ಕ್ಕೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹ 21 ಸಾವಿರ ನಗದು, ಫಲಕವನ್ನು ಒಳಗೊಂಡಿದ್ದು, ಜುಲೈ 30ರಂದು ನಗರದಲ್ಲಿ  ಪ್ರಶಸ್ತಿ ಪ್ರದಾನ ನಡೆಯಲಿದೆ.

ದೊಡ್ಡನಗೌಡರ ಜನ್ಮದಿನವಾದ 27ರಂದು ಜೋಳದರಾಶಿ ಗ್ರಾಮದಲ್ಲಿ ರಂಗ ಜ್ಯೋತಿ ಯಾತ್ರೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.