ADVERTISEMENT

ಅತ್ಯುತ್ತಮ ತನಿಖೆ| ರಾಜ್ಯದ ಆರು ಪೊಲೀಸ್‌ ಅಧಿಕಾರಿಗಳಿಗೆ ಗೃಹ ಸಚಿವರ ಪದಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 9:35 IST
Last Updated 12 ಆಗಸ್ಟ್ 2022, 9:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: 2022ನೇ ಸಾಲಿನ ಅತ್ಯುತ್ತಮ ತನಿಖೆಗೆ ಕರ್ನಾಟಕದ ಆರು ಪೊಲೀಸ್‌ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದೆ.

ಲಕ್ಷ್ಮೀ ಗಣೇಶ್ ಕೆ, ಅಡಿ (ಎಸ್ಪಿ), ವೆಂಕಟಪ್ಪ ನಾಯಕ (ಡಿವೈಎಸ್ಪಿ), ಮೈಸೂರು ರಾಜೇಂದ್ರ ಗೌತಮ್ (ಡಿವೈಎಸ್ಪಿ), ಶಂಕರ ಕಾಳಪ್ಪ ಮಾರಿಹಾಳ್ (ಡಿವೈಎಸ್ಪಿ), ಶಂಕರಗೌಡ ವೀರನಗೌಡ ಪಾಟೀಲ್ (ಡಿವೈಎಸ್ಪಿ) ಗುರುಬಸವರಾಜ ಹೆಚ್ ಹಿರೇಗೌಡರ್ (ಸರ್ಕಲ್ ಪೊಲೀಸ್) ಅವರು ಗೃಹ ಸಚಿವರ ಪದಕ್ಕೆ ಭಾಜನರಾಗಿದ್ದಾರೆ.

ಇವರಷ್ಟೇ ಅಲ್ಲದೇ, ದೇಶದ ವಿವಿಧ ರಾಜ್ಯಗಳ 151 ಪೊಲೀಸ್‌ ಅಧಿಕಾರಿಗಳಿಗೂ ಗೃಹ ಸಚಿವರ ಪದಕ ಸಿಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.