ADVERTISEMENT

ಚಾಮುಂಡಿ ಬೆಟ್ಟದಲ್ಲಿ ಸಾ.ರಾ.ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಕಿಡಿ

ಬೆಟ್ಟದಲ್ಲಿ ಹೈಡ್ರಾಮಾ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 4:43 IST
Last Updated 17 ಅಕ್ಟೋಬರ್ 2019, 4:43 IST
ಎಚ್.ವಿಶ್ವನಾಥ್  (ಸಂಗ್ರಹ ಚಿತ್ರ)
ಎಚ್.ವಿಶ್ವನಾಥ್ (ಸಂಗ್ರಹ ಚಿತ್ರ)   

ಮೈಸೂರು:ನಾನು ₹ 25 ಕೋಟಿಗೆ ಖರೀದಿಯಾಗಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. ನನ್ನನ್ನು ಖರೀದಿಸಿದ ಆ ವ್ಯಕ್ತಿ ಬರಲಿ ಎಂದು ಕಾಯುತ್ತಿದ್ದೇನೆ ಎಂದು ಅನರ್ಹ ಶಾಸಕಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಚಾಮುಂಡೇಶ್ವರಿ ಬೆಟ್ಟದಲ್ಲಿ ಮಾಧ್ಯಮದವರ ಬಳಿ ಮಾತನಾಡಿದ ಅವರುಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾನು ಆಣೆ ಮಾಡುತ್ತೇನೆ ಎಂದು ಹೇಳಿಲ್ಲ. ವಿಷಯ ತಿರುಚಬೇಡಿ. ನಾನ್ಯಾಕೆ ಆಣೆ ಮಾಡಲಿ? ಆರೋಪ ಮಾಡಿದ್ದು ಅವರು. ಅವರು ಆರೋಪ ಸಾಬೀತುಪಡಿಸಲಿ. ನನ್ನನ್ನು ಖರೀದಿಸಿದ ವ್ಯಕ್ತಿಯನ್ನು ತೋರಿಸಲಿ’ ಎಂದು ವಿಶ್ವನಾಥ್ ಸವಾಲು ಹಾಕಿದರು.

ಉಭಯ ನಾಯಕರು ಪಟ್ಟು ಬಿಡದ ಕಾರಣ ಬೆಟ್ಟದಲ್ಲಿ ತುಸು ಹೊತ್ತು ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಜತೆಗೆ ಮಹೇಶ್, ವಿಶ್ವನಾಥ್ ಬೆಂಬಲಿಗರೂ ಗದ್ದಲ ಉಂಟುಮಾಡಿದರು. ಬಳಿಕ ವಿಶ್ವನಾಥ್ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ವಿಶ್ವನಾಥ್ ಬೆಟ್ಟದಿಂದ ತೆರಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.