ADVERTISEMENT

News Express: ನಾನಿರುವವರಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ- ಹೆಗಡೆ

ನಾನಿರುವವರಗೆ ಕಾಂಗ್ರೆಸ್ ನೆಮ್ಮದಿಯಿಂದಿರಲು ಬಿಡುವುದಿಲ್ಲ- ಅನಂತ ಕುಮಾರ ಹೆಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮಾರ್ಚ್ 2024, 13:39 IST
Last Updated 12 ಮಾರ್ಚ್ 2024, 13:39 IST

ಕಾಂಗ್ರೆಸ್ ದೇಶದಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ. ನಾನಿರುವವರೆಗೆ ಆ ಪಕ್ಷಕ್ಕೆ ನೆಮ್ಮದಿ ನೀಡುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಕಾರವಾರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆನೆ, ಕುರಿಗೆ ಇರುವಷ್ಟು ವ್ಯತ್ಯಾಸ ಇದೆ. ಮೋದಿ ಅವರಿಗೆ ರಾಹುಲ್ ಗಾಂಧಿ ಪ್ರತಿಸ್ಪರ್ಧಿ ಎಂಬುದೇ ದೊಡ್ಡ ಕಾಮಿಡಿ ಎಂದು ಟೀಕಿಸಿದರು. ನೈತಿಕವಾಗಿ ಕಾಂಗ್ರೆಸ್ ಬೆಲೆ ಕಳೆದುಕೊಂಡಿದೆ. ಸಂಘಟನಾತ್ಮಕವಾಗಿ ಸೊರಗಿದೆ. ಅಭ್ಯರ್ಥಿಯಾಗಲು ಆ ಪಕ್ಷದಲ್ಲಿ ನಾಯಕರು ಮುಂದೆ ಬರುತ್ತಿಲ್ಲ. ಹೈಕಮಾಂಡ್ ಕೇಳಿದರೆ ನಾಯಕರು ಕರಿಮಣಿ ಮಾಲೀಕ ನಾನಲ್ಲ ಎನ್ನುತ್ತಿದ್ದಾರೆ ಎಂದೂ ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.