ADVERTISEMENT

‘ಟಿಪ್ಪು ಸುಲ್ತಾನ್‌’ ಅಧ್ಯಾಯ ಕೈಬಿಡುವ ನಿರ್ಧಾರಕ್ಕೆ ಅಪ್ಪಚ್ಚು ರಂಜನ್‌ ಮೆಚ್ಚುಗೆ

ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ ಶಾಸಕ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 11:55 IST
Last Updated 28 ಜುಲೈ 2020, 11:55 IST
ಎಂ.ಪಿ.ಅಪ್ಪಚ್ಚು ರಂಜನ್ 
ಎಂ.ಪಿ.ಅಪ್ಪಚ್ಚು ರಂಜನ್    

ಮಡಿಕೇರಿ: ಏಳನೆಯ ತರಗತಿಯ ಪಠ್ಯಕ್ರಮದಿಂದ ‘ಟಿಪ್ಪು ಸುಲ್ತಾನ್‌’ ಅಧ್ಯಾಯವನ್ನು ಕೈಬಿಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಸ್ವಾಗತಿಸಿದ್ದಾರೆ.

‘ಟಿಪ್ಪು ಸುಲ್ತಾನ್ ಎನ್ನುವ ಹೆಸರೇ ಕೊಡಗಿಗೆ ಅಪಮಾನ‌. ಯಾವ ಸಾಧನೆ ಮಾಡದಿದ್ದರೂ ಪಠ್ಯದಲ್ಲಿ ಆತನನ್ನು ವಿಜೃಂಭಿಸುವ ಕೆಲಸ ಮಾಡಲಾಗಿತ್ತು. ಟಿಪ್ಪು ಮಾಡಿರುವುದು ಎಲ್ಲವೂ ಅನ್ಯಾಯದ ಕೆಲಸಗಳೇ. ಪಠ್ಯದಿಂದ ಕೈಬಿಟ್ಟಿರುವುದು ಸಂತಸದ ವಿಷಯ. ಅದಕ್ಕೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದರು.

ಪಠ್ಯದಿಂದ ಟಿಪ್ಪು ವಿಷಯ ಕೈಬಿಡುವಂತೆ ಆಗ್ರಹಿಸಿ, ಕಳೆದ ಅಕ್ಟೋಬರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಅಪ್ಪಚ್ಚು ರಂಜನ್‌ ಪತ್ರ ಬರೆದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.