ADVERTISEMENT

ಕುಲಪತಿ ವೇಣುಗೋಪಾಲ ನೇಮಕಾತಿ ರದ್ದು: ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:32 IST
Last Updated 24 ಸೆಪ್ಟೆಂಬರ್ 2019, 19:32 IST
ವೇಣುಗೋಪಾಲ
ವೇಣುಗೋಪಾಲ   

ಬೆಂಗಳೂರು: ಹಲವು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್‌.ಪ್ರೊ.ವೇಣುಗೋಪಾಲ ಅವರ ನೇಮಕವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ನೇಮಕಾತಿ ಪ್ರಶ್ನಿಸಿದ್ದ ಧಾರವಾಡದ ಡಾ.ಸಂಗಮೇಶ ಎ.ಪಾಟೀಲಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪುರಸ್ಕರಿಸಿದೆ. ಜೂನ್‌ 12, 2018ರಂದು ಇವರ ನೇಮಕವಾಗಿತ್ತು.

‘ಇವರ ನೇಮಕವು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–2000 ಕಲಂ 14 (4)ಕ್ಕೆ ವಿರುದ್ಧವಾಗಿದೆ’ ಎಂದು ಅರ್ಜಿದಾರರು ವಾದಿಸಿದ್ದರು. ಶೋಧನಾ ಸಮಿತಿ ಶಿಫಾರಸಿನಂತೆ ಕುಲಪತಿ ಸ್ಥಾನಕ್ಕೆ ತನ್ನ ಹೆಸರು ಪರಿಗಣಿಸಲು ನಿರ್ದೇಶಿಸಲು ಕೋರಿದ್ದರು.

ADVERTISEMENT

ಆರೋಪಗಳೇನು?
* ವೇಣುಗೋಪಾಲ ಅವರು ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ಗೆ (ಯುವಿಸಿಇ) ನೇಮಕಗೊಳ್ಳುವಾಗ ಸುಳ್ಳು ಜಾತಿ ಪ್ರಮಾಣಪತ್ರ ಮತ್ತು ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದರು.
* ವಿದ್ಯಾರ್ಥಿನಿಯೊಬ್ಬರಿಗೆ ಅಕ್ರಮವಾಗಿ ಪರೀಕ್ಷೆ ಬರೆಯಲು ನೆರವಾಗಿದ್ದರು. ರೀಡರ್‌ ಹುದ್ದೆಗೆ ನೇಮಕವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿತ್ತು.
* ಯುವಿಸಿಇನಲ್ಲಿ ಪೂರ್ಣಾವಧಿ ನೌಕರರಾಗಿದ್ದಾಗ ಪಿಎಚ್‌.ಡಿ ಅಧ್ಯಯನಕ್ಕೆ ಸಂಬಂಧಿಸಿದನಾಲ್ಕು ಕೋರ್ಸ್‌ಗಳನ್ನು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಏಕಕಾಲಕ್ಕೆ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.