ಚಿತ್ರದುರ್ಗ: ನಗರ ಬಸ್ ನಿಲ್ದಾಣ ಸಮೀಪದ ನರ್ತಕಿ ಬಾರ್ ಬಾಗಿಲು ಮುರಿದು ₹ 20 ಸಾವಿರ ಮೌಲ್ಯದ ಮದ್ಯ ಹಾಗೂ ₹ 8 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಮದ್ಯದಂಗಡಿಯ ಹಿಂಭಾಗದ ಬಾಗಿಲು ಮುರಿದು ಕೃತ್ಯ ಎಸಗಲಾಗಿದೆ. ಮದ್ಯದಂಗಡಿ ಮಾಲೀಕರು ಪರಿಶೀಲಿಸಿದ ಬಳಿಕ ಕೃತ್ಯ ಗೊತ್ತಾಗಿದೆ.
ಮದ್ಯ ಸಿಗದೆ ಬೇಸರಗೊಂಡವರೇ ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾರ್ ಸಮೀಪ ಮಲಗಿದ್ದ ನಿರ್ಗತಿಕನಿಗೂ ಕಳವು ಮಾಡಿದ ಮದ್ಯ ನೀಡಿ ಪರಾರಿಯಾಗಿದ್ದಾರೆ. ಸಿಪಿಐ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.