ADVERTISEMENT

ಬೊಮ್ಮಾಯಿ ಕ್ಷಮೆ ಕೇಳಿರುವುದು ಸುಳ್ಳು: ರಾಮಚಂದ್ರ ಗುಹಾ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 21:36 IST
Last Updated 20 ಫೆಬ್ರುವರಿ 2020, 21:36 IST
ರಾಮಚಂದ್ರ ಗುಹಾ ಅವರನ್ನು ಪೊಲೀಸರು ಎಳೆದಾಡಿದ ಚಿತ್ರ
ರಾಮಚಂದ್ರ ಗುಹಾ ಅವರನ್ನು ಪೊಲೀಸರು ಎಳೆದಾಡಿದ ಚಿತ್ರ   

ಬೆಂಗಳೂರು: ‘ಪೊಲೀಸರು ಹಲ್ಲೆ ನಡೆಸಿದ ವಿಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನನ್ನ ಕ್ಷಮೆ ಕೇಳಿಲ್ಲ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ತಿಳಿಸಿದ್ದಾರೆ.

ಆದರೆ ಗುಹಾ ಅವರಿಗೆ ಕರೆ ಮಾಡಿ ಕ್ಷಮೆ ಕೇಳಿರುವುದಾಗಿ ಬೊಮ್ಮಾಯಿ ವಿಧಾನಸಭೆಯಲ್ಲಿ ಬುಧವಾರ ಹೇಳಿದ್ದರು.

‘ನಗರದ ಟೌನ್‌ಹಾಲ್ ಮುಂಭಾಗಡಿಸೆಂಬರ್ 19ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ನನ್ನ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಯಾವುದೇ ದೂರವಾಣಿ ಕರೆ ನಾನು ಸ್ವೀಕರಿಸಿಲ್ಲಅಥವಾ ನನ್ನ ಕ್ಷಮೆಯನ್ನೂ ಕೇಳಿಲ್ಲ. ಹಾಗೊಂದು ವೇಳೆ ಕ್ಷಮೆಯಾಚಿಸಿದ್ದರೆ ಅದನ್ನು ತಿರಸ್ಕರಿಸುತ್ತಿದ್ದೆ.144ನೇ ವಿಧಿಯ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ ಈಗಾಗಲೇ ಹೇಳಿದೆ. ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸಾವಿರಾರು ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು, ಅವರಲ್ಲಿ ನಾನೂ ಒಬ್ಬನಾಗಿದ್ದೆ ಎಂಬ ಹೆಮ್ಮೆ ಇದೆ’ ಎಂದು ಗುಹಾ ಅವರು ಹೇಳಿದ್ದಾರೆ.

ADVERTISEMENT

‘ಬೊಮ್ಮಾಯಿ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಸುಳ್ಳು ಸುದ್ದಿಯನ್ನು ಪ್ರಚುರ ಪಡಿಸುತ್ತಿರುವುದಕ್ಕೆ ಇದೊಂದು ನಿದರ್ಶನ. ಈ ಮೂಲಕ ಬೊಮ್ಮಾಯಿ ಅವರು ಜನರನ್ನು ಅವಮಾನಿಸಿದ್ದು, ಮಾಧ್ಯಮದ ಮುಂದೆ ಜನರು ಹಾಗೂ ಗುಹಾ ಅವರ ಕ್ಷಮೆ ಕೇಳಬೇಕು’ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.