ADVERTISEMENT

ಮಾಲತಿ ಹೆಗಡೆಗೆ ಪ್ರಥಮ ಬಹುಮಾನ

ಪ್ರಜಾವಾಣಿ ‘ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ 2020’

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 17:00 IST
Last Updated 9 ಜನವರಿ 2020, 17:00 IST
ಮಾಲತಿ ಹೆಗಡೆ, ನಳಿನಿ ಟಿ. ಭೀಮಪ್ಪ, ನಿರ್ಮಲಾ ಶೆಟ್ಟಿ
ಮಾಲತಿ ಹೆಗಡೆ, ನಳಿನಿ ಟಿ. ಭೀಮಪ್ಪ, ನಿರ್ಮಲಾ ಶೆಟ್ಟಿ   

ಬೆಂಗಳೂರು: 2020ನೇ ಸಾಲಿನ ಪ್ರಜಾವಾಣಿ ‘ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದೆ.ಮಾಲತಿ ಹೆಗಡೆಯವರು ಬರೆದ ‘ಜೀವದಾಯಿನಿಯರ ಜಲಗಾಥೆ!’ ಮೊದಲ ಬಹುಮಾನ ಪಡೆದಿದೆ.

ನಳಿನಿ ಟಿ. ಭೀಮಪ್ಪ ಅವರು ಬರೆದ ‘ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?’ ಹಾಗೂನಿರ್ಮಲಾ ಶೆಟ್ಟರ ಅವರ ‘ಅಲಂಕಾರಕ್ಕೆ ಸೈ.. ಆಪದ್ಬಾಂಧವಳಿಗೆ ಜೈ!’ ಪ್ರಬಂಧಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದಿವೆ.ಕಲ್ಪನಾ ಪ್ರಭಾಕರ್‌ ಸೋಮನಳ್ಳಿಯವರ ‘ಎಮ್ಮಾಯಣ’ ಮತ್ತು ಲಲಿತಾ ಕೆ. ಹೊಸಪ್ಯಾಟಿಯವರ ‘ಏರಿದ ಬಸ್ಸಲಿ ಬೆರೆತಾಗ!’ ಪ್ರಬಂಧಗಳು ಮೆಚ್ಚುಗೆಗೆ ಪಾತ್ರವಾಗಿವೆ.

ಹಿರಿಯ ಕಥೆಗಾರ್ತಿ ವಸುಮತಿ ಉಡುಪ ಹಾಗೂ ಪ್ರಬಂಧ ಬರಹಗಾರಈರಪ್ಪ ಎಂ. ಕಂಬಳಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.