ADVERTISEMENT

ಬಿಎಸ್‌ವೈಗೆ ಬಿಜೆಪಿ ಚುಚ್ಚಿದ ದ್ರೋಹದ ಬಾಣಗಳು: ಪಟ್ಟಿ ನೀಡಿದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2022, 10:06 IST
Last Updated 13 ಜುಲೈ 2022, 10:06 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ದ್ರೋಹ ಮಾಡಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿರುವ ಬಿಎಸ್‌ವೈ ಅವರಿಗೆ ಬಿಜೆಪಿ ಚುಚ್ಚಿದ ದ್ರೋಹದ ಬಾಣಗಳು’ ಎಂಬ ಶೀರ್ಷಿಕೆಯಡಿ ಪಟ್ಟಿ ನೀಡಿದೆ.

ಕಾಂಗ್ರೆಸ್‌ ನೀಡಿದ ಪಟ್ಟಿ ಇಲ್ಲಿದೆ...

ADVERTISEMENT

*ಕಾರಣ ನೀಡದೆ ಸಿಎಂ ಸ್ಥಾನದಿಂದ ಬಿಎಸ್‌ವೈ ಪದಚ್ಯುತಿ
*ಅವರ ರಾಜ್ಯ ಪ್ರವಾಸಕ್ಕೆ ತಡೆ
*ಬಿಎಸ್‌ವೈ ಆಪ್ತರ ಮೇಲೆ ಐಟಿ ದಾಳಿ
*ವಿಜಯೇಂದ್ರರಿಗೆ ಪರಿಷತ್ ಸ್ಥಾನ ವಂಚನೆ
*ನಿಗಮ, ಮಂಡಳಿಗಳಿಂದ ಆಪ್ತರ ಕಿಕ್ಔಟ್

‘ಇನ್ನೆಷ್ಟು ಬಾಣಗಳಿವೆ?’ ಬಿಜೆಪಿಗೆ ಕಾಂಗ್ರೆಸ್‌ ಪ್ರಶ್ನಿಸಿದೆ.

#BSYmuktaBJP ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಕಾಂಗ್ರೆಸ್‌ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.