ಬೆಂಗಳೂರು: ಕಲಾಗ್ರಾಮದಲ್ಲಿರುವ ಸಾಹಿತಿಗಳಾದ ಜಿ.ಎಸ್.ಶಿವರುದ್ರಪ್ಪ ಹಾಗೂ ಯು.ಆರ್.ಅನಂತಮೂರ್ತಿ ಸಮಾಧಿಗಳ ಜಾಗದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಿಕಾಸ ರಂಗ ಮನವಿ ಮಾಡಿದೆ.
'ಕಲಾಗ್ರಾಮದಲ್ಲಿ ಶಿವರುದ್ರಪ್ಪ ಅವರ ಸ್ಮಾರಕ ನಿರ್ಮಿಸುವುದಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಯು.ಆರ್.ಅನಂತಮೂರ್ತಿ ಅವರ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ತಿಳಿಸಿತ್ತು. ಕಲಾಗ್ರಾಮದಲ್ಲೇ ಇಬ್ಬರೂ ಸಾಹಿತಿಗಳ ಸ್ಮಾರಕ ನಿರ್ಮಿಸಬೇಕು‘ ಎಂದು ವಿಕಾಸ ರಂಗದ ಪ್ರಧಾನ ಸಂಚಾಲಕ ವ.ಚ.ಚನ್ನೇಗೌಡ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.