ADVERTISEMENT

ವಾಲ್ಮೀಕಿ ಸಮಾಜಕ್ಕೆ ಸೇರದವರಿಗೂ ಪ್ರಮಾಣ ಪತ್ರ: ಶ್ರೀರಾಮುಲುಗೆ‌ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 19:45 IST
Last Updated 15 ನವೆಂಬರ್ 2022, 19:45 IST
ಶ್ರೀರಾಮುಲುಗೆ‌ ಮುತ್ತಿಗೆ
ಶ್ರೀರಾಮುಲುಗೆ‌ ಮುತ್ತಿಗೆ   

ಬಾಗಲಕೋಟೆ: ವಾಲ್ಮೀಕಿ ಸಮಾಜಕ್ಕೆ ಸೇರದ ಕೆಲವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಸಮಾಜದ ಮುಖಂಡರು ಸಚಿವ ಶ್ರೀರಾಮುಲು ಅವರಿಗೆ ಮುತ್ತಿಗೆ ಹಾಕಿದರು.

ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಿರುವ ಎಸ್ ಟಿ ಸಮಾವೇಶದ ಪೂರ್ವಭಾವಿ ಸಭೆಗೆ ಬಂದಿದ್ದ ಅವರಿಗೆ‌ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವಾಲ್ಮೀಕಿ ಸಮಾಜಕ್ಕೆ ಸೇರದ ಕೆಲವರಿಗೆ ಎಸ್ ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕೂಡಲೇ ಸ್ಪಂದಿಸಿದ ಸಚಿವ ಶ್ರೀರಾಮುಲು, ಜಿಲ್ಲಾಧಿಕಾರಿಗೆ ಮಾತನಾಡಿ ಪ್ರಮಾಣಪತ್ರ ನೀಡಬೇಡಿ. ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವೆ ಎಂದರು.

ಅನರ್ಹರಿಗೆ ಎಸ್‌ಟಿ ಪ್ರಮಾಣಪತ್ರ: ಕಲಬುರಗಿ, ಬೀದರ್‌ನಲ್ಲಿ ಪ್ರತಿಭಟನೆ
ಕಲಬುರಗಿ:
‘ವಾಲ್ಮೀಕಿ ಸಮುದಾಯಕ್ಕೆ ದಕ್ಕಬೇಕಾದ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣಪತ್ರವನ್ನು ಪ್ರವರ್ಗ–1ರಲ್ಲಿ ಬರುವ ಕೆಲ ಜಾತಿಯವರುಮತ್ತು ಮೇಲ್ವರ್ಗದವರಿಗೆ ಕೊಡುವುದನ್ನು ತಡೆಯಬೇಕು’ ಎಂದು ಒತ್ತಾಯಿಸಿ ರಾಜ್ಯ ಎಸ್‌ಸಿ, ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿಯ ಕಾರ್ಯಕರ್ತರು ಕಲಬುರಗಿ ಹಾಗೂ ಬೀದರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ವಾಲ್ಮೀಕಿ ಜನಾಂಗದ ಪರ್ಯಾಯ ಪದಗಳಾದ ತಳವಾರ ಮತ್ತು ಪರಿವಾರ ಜನಾಂಗದವರಿಗೆ ಎಸ್‌ಟಿ ಜಾತಿ ಪ್ರಮಾಣಪತ್ರಕ್ಕೆ ಬದಲು ಪ್ರವರ್ಗ–1ರ ಹಿಂದು ಳಿದ ಜಾತಿಯಲ್ಲಿ ಬರುವ ಕೋಲಿ, ಕಬ್ಬಲಿಗ ತಳವಾರ ಜಾತಿಯವರಿಗೆ ತಹಶೀಲ್ದಾರ್‌ಗಳು ಎಸ್‌ಟಿ ಪ್ರಮಾಣಪತ್ರ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.