ಮಳವಳ್ಳಿ (ಮಂಡ್ಯ): ‘ಕಾಂಗ್ರೆಸ್ ಶಾಸಕರು ಪಕ್ಷ ನಿಷ್ಠೆಯಿಂದ ಮತ ಹಾಕಬೇಕು ಎನ್ನುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಶಾಸಕರು ಆತ್ಮಸಾಕ್ಷಿಗೆ ಅನುಗುಣವಾಗಿ ಅಡ್ಡ ಮತದಾನ ಮಾಡಿ ಎನ್ನುವುದು ಯಾವ ನ್ಯಾಯ?’ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿ, ‘ಜೆಡಿಎಸ್ ಶಾಸಕರು ಮಾತ್ರ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಬೇಕು ಎನ್ನುವುದು ಆತ್ಮಸಾಕ್ಷಿಯಾ? ಅಡ್ಡ ಮತದಾನ ಮಾಡಿದವರನ್ನು ಸದಸ್ಯತ್ವದಿಂದಲೇ ತೆಗೆಸಿ ಪಕ್ಷದಿಂದ ಹೊರ ಹಾಕಿದ ಅವರಿಗೆ ನಾಚಿಕೆ ಆಗುವುದಿಲ್ಲವೇ? ಆತ್ಮಸಾಕ್ಷಿಯಿಂದ ಅಡ್ಡ ಮತದಾನ ಮಾಡಿ ಎನ್ನುವ ಅವರಿಗೆ ಆತ್ಮವೂ ಇಲ್ಲ; ಸಾಕ್ಷಿಯೂ ಇಲ್ಲ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.