ADVERTISEMENT

ಕುರಿ ತಿಂದಿದ್ದಕ್ಕೆ ಚಿರತೆ ಕೊಂದರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:03 IST
Last Updated 15 ನವೆಂಬರ್ 2018, 19:03 IST
ಬಂಧಿತ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು, ಕೂಡ್ಲಿಗಿಯ ಮಾರಮ್ಮನ ಗುಡ್ಡಕ್ಕೆ ಗುರುವಾರ ಕರೆದೊಯ್ದು ಮಹಜರು ಮಾಡಿದರು
ಬಂಧಿತ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು, ಕೂಡ್ಲಿಗಿಯ ಮಾರಮ್ಮನ ಗುಡ್ಡಕ್ಕೆ ಗುರುವಾರ ಕರೆದೊಯ್ದು ಮಹಜರು ಮಾಡಿದರು    

ಬೆಂಗಳೂರು/ಕೂಡ್ಲಿಗಿ: ತಾವು ಸಾಕಿದ್ದ ಕುರಿಯನ್ನು ತಿಂದಿತು ಎಂಬ ಕಾರಣಕ್ಕೆ ಚಿರತೆಯನ್ನು ಕೊಂದು ಅದರ ಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಮೂವರು ಕುರಿಗಾಹಿಗಳನ್ನು ನಗರದ ಕೊಡಿಗೇಹಳ್ಳಿಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ದೇವರಹಟ್ಟಿಯ ಸುರೇಶ್, ಪಾಪಣ್ಣ ಹಾಗೂ ಬಸವರಾಜ ಬಂಧಿತರು. ಅವರಿಂದ ಚರ್ಮವನ್ನು ಜಪ್ತಿ ಮಾಡಿರುವ ಪೊಲೀಸರು, ಚಿರತೆ ಕೊಂದಿದ್ದ ಸ್ಥಳವಾದ ಕೂಡ್ಲಿಗಿಯಮಾರಮ್ಮನ ಗುಡ್ಡಕ್ಕೆ ಗುರುವಾರ ಕರೆದೊಯ್ದು ಮಹಜರು ನಡೆಸಿದರು.

ಗುಡ್ಡದಲ್ಲಿ ಆರೋಪಿಗಳನ್ನು ಸುತ್ತಾಡಿಸಿದಕೊಡಿಗೇಹಳ್ಳಿ ಠಾಣೆ ಪಿಎಸ್‍ಐ ವಿಜಯ್ ನೇತೃತ್ವದ ತಂಡ, ಚಿರತೆ ಕೊಂದ ಘಟನೆಯನ್ನು ದಾಖಲಿಸಿಕೊಂಡಿತು. ಅದರ ವಿಡಿಯೊ ಚಿತ್ರೀಕರಣ ಸಹ ಮಾಡಿಕೊಳ್ಳಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.