ಪುತ್ತೂರು: ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಕೋಳಿಪುಕ್ಕ ಕೀಳಲು ಇರಿಸಿದ್ದ ಬಿಸಿ ನೀರಿನ ಬಕೆಟಿನಲ್ಲಿ ಬಿದ್ದು ಬಾಲಕಿ ಮೃಪಟ್ಟಿದ್ದಾಳೆ.
ಬೆದ್ರಾಳ ನಿವಾಸಿ ರಮೇಶ್ ಗೌಡ ಮತ್ತು ಭವ್ಯಶ್ರೀ ದಂಪತಿ ಪುತ್ರಿ ತನ್ವಿ (7) ಮೃತ ಬಾಲಕಿ. ಈಕೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.
ಆಟವಾಡುತ್ತಿದ್ದ ತನ್ವಿ ಆಯತಪ್ಪಿ ಬಿದ್ದ ಪರಿಣಾಮ ಬಕೆಟ್ನಲ್ಲಿದ್ದ ನೀರು ಆಕೆಯ ಮೈಮೇಲೆ ಚೆಲ್ಲಿತ್ತು.
ಗಂಭೀರ ಗಾಯಗಳಾಗಿದ್ದ ಆಕೆಯನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ವೇಳೆ ಬಾಲಕಿಯು ಮೃತಪಟ್ಟಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.