ADVERTISEMENT

ಸಾಷ್ಟಾಂಗ ‌ನಮಸ್ಕಾರ ಮಾಡಿ‌ ಹನುಮಾನ್ ಚಾಲೀಸ್ ಪಠಿಸಿದ ಸಿಎಂ ಬಸವರಾಜ ‌ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 9:35 IST
Last Updated 1 ಆಗಸ್ಟ್ 2022, 9:35 IST
ಸಿಎಂ ಬಸವರಾಜ ‌ಬೊಮ್ಮಾಯಿ
ಸಿಎಂ ಬಸವರಾಜ ‌ಬೊಮ್ಮಾಯಿ   

ಅಂಜನಾದ್ರಿ (ಕೊಪ್ಪಳ ‌ಜಿಲ್ಲೆ): ಆಂಜನೇಯ ಬೆಟ್ಟದ ಕೆಳಭಾಗದಲ್ಲಿ ಸೋಮವಾರ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರು ಸಾಷ್ಟಾಂಗ ‌ನಮಸ್ಕಾರ ಮಾಡಿ ಹನುಮಾನ್ ಚಾಲೀಸ್ ಪಠಿಸಿದರು.

ಹನುಮನ‌ ಪಾದಗಳಿಗೆ ನಮಸ್ಕರಿಸಿದರು. ಈ ವೇಳೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮುಖ್ಯಮಂತ್ರಿಗೆ ಬೆಳ್ಳಿ ಹನುಮನ ಮೂರ್ತಿ ‌ಉಡುಗೊರೆ ನೀಡಿದರು.

ಸಚಿವರಾದ ಸುಧಾಕರ್, ಶಶಿಕಲಾ ಜೊಲ್ಲೆ, ಹಾಲಪ್ಪ ಆಚಾರ್, ಬೈರತಿ ಬಸವರಾಜ, ಶಾಸಕರಾದ ಪರಣ್ಣ‌ ಮುನವಳ್ಳಿ, ಬಸವರಾಜ ದಢೇಸಗೂರ, ಸಂಸದ ಕರಡಿ‌ ಸಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.