ADVERTISEMENT

ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 16:20 IST
Last Updated 15 ಅಕ್ಟೋಬರ್ 2023, 16:20 IST
ಸಿ.ಎನ್‌.ಅಶ್ವತ್ಥನಾರಾಯಣ
ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ‘ಪ್ರೊ.ಕೆ.ಎಸ್‌.ಭಗವಾನ್‌ಗೆ ಶಕ್ತಿ, ತಾಕತ್ತು ಇದ್ರೆ ಒಕ್ಕಲಿಗರ ಬಗ್ಗೆ ಮಾತನಾಡಲಿ. ನರ ಇದ್ರೆ ಮಾತಾಡು. ನಂತ್ರ ಗೊತ್ತಾಗತ್ತೇ ಎಂಟರ್‌ಟೈನ್‌ಮೆಂಟು’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.

‘ಬುದ್ಧಿ ಏರುಪೇರಾಗಿರುವ ಭಗವಾನ್‌ ಎಂಬ ವ್ಯಕ್ತಿ ಒಕ್ಕಲುತನದ ಬಗ್ಗೆ ಕುವೆಂಪು ಹೆಸರನ್ನು ಮುಂದಿಟ್ಟುಕೊಂಡು ಮಾತನಾಡುವ ಅಗತ್ಯವಿಲ್ಲ. ನಿನಗೆ ಧೈರ್ಯವಿದ್ದರೆ ನೇರವಾಗಿ ಮಾತಾಡಪ್ಪ, ನರ ಇದ್ರೆ ಮಾತನಾಡು’ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT