ADVERTISEMENT

ನೆರೆ ನಷ್ಟದ ವರದಿಗೆ ಕೇಂದ್ರದ ತಿರಸ್ಕಾರ: ಕಾಂಗ್ರೆಸ್ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2019, 5:28 IST
Last Updated 4 ಅಕ್ಟೋಬರ್ 2019, 5:28 IST
ಕಾಂಗ್ರೆಸ್ ಕಾರ್ಯಕರ್ತರು
ಕಾಂಗ್ರೆಸ್ ಕಾರ್ಯಕರ್ತರು   

ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯಿಂದ ಆಗಿರುವ ಅಂದಾಜುನಷ್ಟದವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.

‘ವರದಿ ಸಲ್ಲಿಕೆಗೆ ಮೊದಲೇ ಪರಿಹಾರ ನೀಡಬೇಕಿತ್ತು. ಆದರೆವರದಿ ಸಲ್ಲಿಸಿದ ನಂತರವೂ ಪರಿಹಾರ ಬಿಡುಗಡೆ ಮಾಡಲು ಮುಂದಾಗದಿರುವುದು ವಿಷಾದನೀಯ’ ಎಂದು ಹೇಳಿದೆ.

‘ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದು ಹೇಗೆ?25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು?’ ಎಂದು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರನ್ನು ಲೇವಡಿ ಮಾಡಿದೆ.

ADVERTISEMENT

‘ಯಡಿಯೂರಪ್ಪ ಅವರೇಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ’ ಎಂದು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.