ADVERTISEMENT

ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣಗೆ ಇ.ಡಿ. ನೋಟಿಸ್

ಅಕ್ಟೋಬರ್‌ 8ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 5:28 IST
Last Updated 1 ಅಕ್ಟೋಬರ್ 2019, 5:28 IST
ಕೆ.ಎನ್.ರಾಜಣ್ಣ (ಸಂಗ್ರಹ ಚಿತ್ರ)
ಕೆ.ಎನ್.ರಾಜಣ್ಣ (ಸಂಗ್ರಹ ಚಿತ್ರ)   

ತುಮಕೂರು:ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ.

ಅಕ್ಟೋಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಸೆಪ್ಟೆಂಬರ್‌ 24ರಂದೇ ಇ.ಡಿ. ನೋಟಿಸ್ ನೀಡಿದೆ ಎನ್ನಲಾಗಿದೆ.

‘ಯಾವ ವಿಚಾರಕ್ಕೆ ಸಂಬಂಧಿಸಿ ವಿಚಾರಣೆ ಎಂದು ತಿಳಿಸಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಒಡೆತನದ ‘ಹರ್ಷ ಶುಗರ್ಸ್‌’ಗೆ ಅಪೆಕ್ಸ್ ಬ್ಯಾಂಕ್ ₹ 300 ಕೋಟಿ ಸಾಲ ನೀಡಿದೆ. ಈ ಸಂಬಂಧ ವಿಚಾರಣೆಗೆ ಕರೆದಿರಬಹುದು ಎನಿಸುತ್ತದೆ’ ಎಂದು ರಾಜಣ್ಣ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.