ADVERTISEMENT

ಪರಿಷತ್‌ ಚುನಾವಣೆ: ಯಾರಿಗೆ ಮಣೆ?

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:53 IST
Last Updated 27 ಜನವರಿ 2020, 19:53 IST
   

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಫೆ.17ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಯಾರಿಗೆ ಮಣೆ ಹಾಕಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಶಿವಾಜಿನಗರ ಕ್ಷೇತ್ರದಿಂದ ವಿಧಾನಸಭೆಗೆ ರಿಜ್ವಾನ್‌ ಅರ್ಷದ್ ಆಯ್ಕೆಯಾದ ಕಾರಣ ಈ ಸ್ಥಾನ ತೆರವಾಗಿದೆ.2022ರ ಜೂನ್‌ 14ರ ವರೆಗೆ ಸದಸ್ಯತ್ವದ ಅವಧಿ ಇರಲಿದೆ. ಬಿಜೆಪಿಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅವಕಾಶ ನೀಡುವ ಸಾಧ್ಯತೆ ಇದ್ದರೂ, ಈ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದು ಬಳಿಕ ಅನರ್ಹರಾದ ಆರ್.ಶಂಕರ್ ಅವರನ್ನೂ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.

ಚುನಾವಣೆವೇಳಾಪಟ್ಟಿ: ಜನವರಿ 30ರಂದು ಅಧಿಸೂಚನೆ ಹೊರಡಿಸಲಿದ್ದು, ಫೆ.6ರೊಳಗೆ ನಾಮಪತ್ರ ಸಲ್ಲಿಸಬೇಕು. 7ರಂದು ಪರಿಶೀಲನೆ ನಡೆಯಲಿದೆ. 10ರೊಳಗೆ ನಾಮಪತ್ರ ಹಿಂದೆಗೆದುಕೊಳ್ಳಬಹುದು. 17ರಂದು ಮತದಾನ ನಡೆಯಲಿದ್ದು, 5 ಗಂಟೆಯ ಬಳಿಕ ಎಣಿಕೆ ನಡೆಯಲಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.