ಮೈಸೂರು: ಚಾಮುಂಡಿಬೆಟ್ಟ ಈ ಬಾರಿಯ ಅದ್ಧೂರಿ ದಸರಾ ಉದ್ಘಾಟನೆಗೆ ಸಜ್ಜಾಗಿದ್ದು, ಬಿಗಿಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಬೆಟ್ಟದ ತಪ್ಪಲಿನ ಸರ್ಕಲ್ ಬಳಿ ಎಲ್ಲ ವಾಹನಗಳ ತಪಾಸಣೆ ಬಳಿಕವೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಲೋಹಶೋಧಕ ಯಂತ್ರವನ್ನು ಅಳವಡಿಸಲಾಗಿದೆ.
ಅಲ್ಲಿಂದ ಮುಂದಕ್ಕೆ ವೇದಿಕೆಯ ಬಳಿಯೂ ಯಂತ್ರವನ್ನು ಅಳವಡಿಸಲಾಗಿದೆ. ದೇವಾಲಯಕ್ಕೆ ಅತಿಗಣ್ಯರನ್ನಷ್ಟೇ ಬಿಡಲು ವ್ಯವಸ್ಥೆ ಮಾಡಲಾಗಿದೆ.
ಬೆಟ್ಟದ ತಪ್ಪಲಿನಿಂದ ತುದಿವರೆಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಬಾಂಬ್ ಪತ್ತೆ ದಳ ಬೆಟ್ಟದ ದಾರಿಯಲ್ಲಿ ನಿರಂತರ ತಪಾಸಣೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.