ADVERTISEMENT

Covid-19 Karnataka Update | ಇಂದು 317 ಹೊಸ ಪ್ರಕರಣ, 322 ಸೋಂಕಿತರು ಗುಣಮುಖ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 13:51 IST
Last Updated 16 ಜೂನ್ 2020, 13:51 IST
   

ಬೆಂಗಳೂರು: ಜೂನ್ 15 ಸಂಜೆ 5 ರಿಂದ,ಜೂನ್ 16ರ ಸಂಜೆ 5 ರವರೆಗೆ317 ಜನರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 322 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,530ಕ್ಕೆ ಏರಿಕೆಯಾಗಿದ್ದು, ಅದರಲ್ಲಿ4,456 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 2,976 ಪ್ರಕರಣಗಳು ಸಕ್ರಿಯವಾಗಿವೆ.72 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.ದಕ್ಷಿಣ ಕನ್ನಡದಲ್ಲಿ 79, ಕಲಬುರಗಿಯಲ್ಲಿ 63, ಬಳ್ಳಾರಿಯಲ್ಲಿ 53,ಬೆಂಗಳೂರು ನಗರದಲ್ಲಿ 47,ಧಾರವಾಡದಲ್ಲಿ 8, ಉಡುಪಿ ಮತ್ತು ಶಿವಮೊಗ್ಗದಲ್ಲಿ ತಲಾ 7, ಯಾದಗಿರಿ, ರಾಯಚೂರು ಮತ್ತುಉತ್ತರ ಕನ್ನಡದಲ್ಲಿ ತಲಾ 6,ಹಾಸನದಲ್ಲಿ 5,ವಿಜಯಪುರ,ಮೈಸೂರು,ರಾಮನಗರ ಮತ್ತು ಗದಗದಲ್ಲಿ ತಲಾ 4, ಬೆಳಗಾವಿಯಲ್ಲಿ 3, ಬೀದರ್‌ನಲ್ಲಿ 2 ಮತ್ತು ತುಮಕೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.