ಬೆಂಗಳೂರು: ರಾಜ್ಯಕ್ಕೆ ಶನಿವಾರ ಬರಲಿರುವ ಕಾಂಗ್ರೆಸ್ ಶಾಸಕಡಿ.ಕೆ.ಶಿವಕುಮಾರ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದುಕೆಪಿಸಿಸಿಕಾರ್ಯದರ್ಶಿ ಕೇಶವರಾಜಣ್ಣತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 1 ಗಂಟೆಗೆಬೆಂಗಳೂರುಕೆಂಪೇಗೌಡವಿಮಾನ ನಿಲ್ದಾಣಕ್ಕೆ ಬರಲಿರುವ ಅವರನ್ನುಅಭಿಮಾನಿಗಳು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು, ಹಿರಿಯ ಕಾಂಗ್ರೆಸ್ಮುಖಂಡರು, ಕಾರ್ಯಕರ್ತರು ಹಾಗೂಅಭಿಮಾನಿಗಳು ಭಾಗವಹಿಸಲಿದ್ದಾರೆ.
ಜಾಮೀನುದೊರೆತಬಳಿಕ ಬೆಂಗಳೂರಿಗೆ ಮೊದಲ ಬಾರಿಗೆ ಬರುತ್ತಿದ್ದು, ಅವರನ್ನು ನೋಡಲು ರಾಮನಗರ, ಕನಕಪುರ.ಬೆಳಗಾವಿ,ಬಳ್ಳಾರಿ,ಮೈಸೂರು,ಹೈದರಾಬಾದ್ಕರ್ನಾಟಕದಿಂದಜನಸಾಗರ ಹರಿದು ಬರಲಿದೆ ಎಂದು ಕೇಶವರಾಜಣ್ಣಮಾಹಿತಿ ನೀಡಿದರು.
ಡಿ.ಕೆ.ಶಿವಕುಮಾರ್ಅವರನ್ನು ಜಾರಿ ನಿರ್ದೇಶನಾಲಯ ಬಲಿ ಪಶು ಮಾಡಿದೆ. ಈ ಪ್ರಕರಣವನ್ನು ಅವರು ರಾಜಕೀಯ, ಕಾನೂನಾತ್ಮಕವಾಗಿ ಎದುರಿಸಲು ಸಮರ್ಥರಿದ್ದಾರೆ. ಎಲ್ಲಾ ಆರೋಪಗಳಿಂದಡಿ.ಕೆ.ಶಿವಕುಮಾರ್ಮುಕ್ತರಾಗಲಿದ್ದಾರೆಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.