ADVERTISEMENT

ಪಕ್ಷಕ್ಕೆ ದ್ರೋಹ ಮಾಡಿ ಪಲಾಯನಗೈದ ಚಂದ್ರಶೇಖರ್: ಸದಾನಂದ ಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 6:09 IST
Last Updated 1 ನವೆಂಬರ್ 2018, 6:09 IST
   

ಬೆಂಗಳೂರು: ರಾಮನಗರದ ಅಭ್ಯರ್ಥಿ ಚಂದ್ರಶೇಖರ್ ಆಸೆ ಆಮಿಷಗಳಿಗೆ ಬಲಿಯಾಗಿ ದ್ರೋಹ ಮಾಡಿ ಪಲಾಯನ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

ದ್ರೋಹ ಎಸಗುವ ಕಾಂಗ್ರೆಸ್‌ನ ರಕ್ತ ಗುಣ ಅವರಿಂದ ಹೋಗಿರಲಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಸದಾನಂದಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಬೇಸತ್ತಿದ್ದೇನೆ ಎಂದು ನಮ್ಮ ಪಕ್ಷ ಸೇರಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಅವರಿಗೆ ಟಿಕೆಟ್ ನೀಡಲಾಯಿತು. ಆದರೆ ಈಗ ಅವರು ವಿದ್ರೋಹ ಮಾಡಿದರು. ಇದೇ ಕುತ್ಸಿತ ಉದ್ದೇಶದಿಂದಲೇ ಬಿಜೆಪಿ ಸೇರಿರಬಹುದು. ಅವರಿಗೆ ರಾಮನಗರದ ಜನ ಮತ್ತು ದೇವರು ಕ್ಷಮಿಸುವುದಿಲ್ಲ. ಅವರ ರಾಜಕೀಯ ಭವಿಷ್ಯವೂ ಇಲ್ಲಿಗೆ ಮುಗಿಯುತ್ತದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.