ಬೆಂಗಳೂರು: ಭಾನುವಾರ ಚಂದ್ರದರ್ಶನ ಆಗದೇ ಇರುವ ಕಾರಣ ಮಂಗಳವಾರ ಈದ್ ಉಲ್ ಫಿತ್ರ್ ಆಚರಿಸಲು ಕೇಂದ್ರೀಯ ಚಂದ್ರದರ್ಶನ ಸಮಿತಿ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದ್ದರಿಂದ ಚಂದ್ರ ಕಾಣಿಸಿಕೊಳ್ಳಲಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಮತ್ತು ದೇಶದ ಯಾವುದೇ ಭಾಗದಲ್ಲೂ ಕಾಣಿಸಲಿಲ್ಲ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ರಂಜಾನ್ ತಿಂಗಳ ಉಪವಾಸ ಸೋಮವಾರಕ್ಕೆ ಕೊನೆಗೊಳ್ಳಲಿದೆ. ಚಂದ್ರ ಕಾಣಿಸಿಕೊಂಡಿದ್ದರೆ ಸೋಮವಾರವೇಈದ್ ಉಲ್ ಫಿತ್ರ್ ಆಚರಿಸಬೇಕಿತ್ತು. ರಾಜ್ಯ ಸರ್ಕಾರವೂ ಈಗಾಗಲೇ ಸೋಮವಾರದಂದು ಸರ್ಕಾರಿ ರಜೆಯನ್ನು ಘೋಷಿಸಿದೆ. ಆದರೆ, ಚಂದ್ರ ದರ್ಶನ ಆಗದ ಕಾರಣ 30ನೇ ದಿನದ ಉಪವಾಸ ಪೂರೈಸಿ, ಮರುದಿನ ಹಬ್ಬ ಆಚರಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.