ಬಾಗಲಕೋಟೆ: ಭಾರತ್ ಬಂದ್ಗೆ ಕರೆ ನೀಡಿ ನಡೆಸುತ್ತಿರುವ ಈ ಹೋರಾಟ ನಿಜವಾದ ರೈತರದ್ದಲ್ಲ. ಇದು ದೇಶದ್ರೋಹಿಗಳ ಹೋರಾಟ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಜಮಖಂಡಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ತಮಗೆ ಮುಖ್ಯಮಂತ್ರಿ ಹಾಗೂ ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ’ನೋಡ್ರೀ ಎಷ್ಟೋ ಮಂದಿ ಯೋಗ್ಯರು ಸೂಕ್ತ ಸ್ಥಾನಮಾನ ಸಿಗದೇ ಹಂಗೇ ಸತ್ತಿದ್ದಾರೆ. ಅವರಲ್ಲಿನಾನು ಒಬ್ಬ ಅಂತಾ ತಿಳಿದುಕೊಳ್ಳಿರಿ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.