ADVERTISEMENT

ಮೈಸೂರಿನಲ್ಲಿ ಬೆಂಕಿಗೆ ಭಸ್ಮವಾದ ಗುಜರಿ ಅಂಗಡಿ: ₹30ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 9:22 IST
Last Updated 9 ಫೆಬ್ರುವರಿ 2020, 9:22 IST
ಮೈಸೂರಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಜ್ವಾಲೆ ಅಕ್ಕಪಕ್ಕದ ಮನೆಯವರೆಗೂ ಹರಡಿರುವುದು
ಮೈಸೂರಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಜ್ವಾಲೆ ಅಕ್ಕಪಕ್ಕದ ಮನೆಯವರೆಗೂ ಹರಡಿರುವುದು   

ಮೈಸೂರು: ಇಲ್ಲಿನ ಬನ್ನಿಮಂಟಪ‍ದ ಸಿ.ವಿ.ರಸ್ತೆಯ ದಾಸ್ತಾನು ಮಳಿಗೆಗೆ ಭಾನುವಾರ ನುಸಕಿನಲ್ಲಿ ಬೆಂಕಿ ಬಿದ್ದು, ಸುಮಾರು ₹30 ಲಕ್ಷಕ್ಕೂ ಅಧಿಕ ಮೌಲ್ಯದ ಗುಜರಿ ಸರಕುಗಳು ಭಸ್ಮವಾಗಿವೆ.

ಸಮೀಪದಲ್ಲೇ ಇದ್ದ ಮನೆಗಳು, ಅಗರಬತ್ತಿ ಕಾರ್ಖಾನೆ ಹಾಗೂ ವಾಹನ ಷೋರಂ ಮಳಿಗೆಗಳಿಗೆ ಬೆಂಕಿ ಹಬ್ಬುವುದನ್ನು ಅಗ್ನಿಶಾಮಕ ಪಡೆ ತಡೆದಿದೆ.

ಬನ್ನಿಮಂಟಪ, ಸರಸ್ವತಿಪುರಂ ಹಾಗೂ ಹೆಬ್ಬಾಳದ ಅಗ್ನಿಶಾಮಕ ಠಾಣೆಗಳಿಂದ 6 ಅಗ್ನಿಶಾಮಕ ವಾಹನಗಳಲ್ಲಿ ಬಂದ 30 ಮಂದಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ADVERTISEMENT

ಗುಜರಿ ವಸ್ತುಗಳಿಗೆ ಹೊತ್ತಿದ್ದ ಬೆಂಕಿಯ ಜ್ವಾಲೆಗಳುಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದ್ದವು. ಮೇಯರ್ ತಸ್ನೀಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸದ್ಯ, ಬೆಂಕಿಯು ನಿಯಂತ್ರಣಕ್ಕೆ ಬಂದಿದೆ. ನಷ್ಟದ ಅಂದಾಜು ಇನ್ನೂ ಖಚಿತವಾಗಿಲ್ಲ. ಬೆಂಕಿ ಬಿದ್ದಿರುವ ಮಲ್ಲಿಕಾರ್ಜುನ ಎಂಟರ್‌ಪ್ರೈಸಸ್‌ನ ರೋಹಿತ್ ಅವರು ₹ 30ರಿಂದ ₹ 50 ಲಕ್ಷದಷ್ಟು ಸರಕುಗಳಿದ್ದವು ಎಂದು ಹೇಳಿದ್ದಾರೆ. ಈಗ ಸರಕುಗಳ ರಾಶಿಯನ್ನು ಜೆಸಿಬಿ ಮೂಲಕ ತೆಗೆದು ಒಳಗಿರುವ ಬೆಂಕಿಯನ್ನು ನಂದಿಸಲಾಗುತ್ತಿದೆ’ ಎಂದು ಬನ್ನಿಮಂಟಪ ಠಾಣೆ ಅಗ್ನಿಶಾಮಕ ಅಧಿಕಾರಿ ಭರತ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.