ಬೆಂಗಳೂರು: ರಾಮನಗರ ಎಸ್ಪಿ ಎಸ್. ಗಿರೀಶ್ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.
ಗಿರೀಶ್ ಅವರನ್ನು ಬೆಂಗಳೂರು ನಗರದ ವೈಟ್ಫೀಲ್ಡ್ ವಿಭಾಗದ ಡಿಸಿಪಿಯನ್ನಾಗಿ ನೇಮಿಸಲಾಗಿದೆ. ಗುಪ್ತದಳದ ಎಸ್ಪಿ ಹುದ್ದೆಯಲ್ಲಿದ್ದ ಕೆ. ಸಂತೋಷ್ ಬಾಬು ಅವರನ್ನು ರಾಮನಗರದ ನೂತನ ಎಸ್ಪಿಯನ್ನಾಗಿ ನೇಮಿಸಲಾಗಿದೆ.
ಚಿತ್ರದುರ್ಗ ಎಸ್ಪಿ ಹುದ್ದೆಯಲ್ಲಿದ್ದ ಜಿ. ರಾಧಿಕಾ ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರ (ಭದ್ರತೆ ಮತ್ತು ವಿಚಕ್ಷಣೆ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಹುದ್ದೆಯಲ್ಲಿದ್ದ ಕೆ. ಪರಶುರಾಮ ಅವರನ್ನು ಚಿತ್ರದುರ್ಗ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.