ಬೆಂಗಳೂರು: ಅಗತ್ಯ ಆಹಾರಗಳ ಮೇಲೆ ಜಿಎಸ್ಟಿ ಹೇರಲು ಹೊರಟಿರುವ ಬಿಜೆಪಿ ಸರ್ಕಾರ ಬಡ, ಮಧ್ಯಮ ವರ್ಗ, ಹಾಗೂ ರೈತರನ್ನು ಮುಗಿಸಲು ಹೊರಟಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಟ್ವೀಟ್ ಮಾಡಿರುವ ಕೆಪಿಸಿಸಿ,‘ಇದು ಕೇಂದ್ರ ಬಿಜೆಪಿ ಸರ್ಕಾರದ ಮತ್ತೊಂದು ಮಾಸ್ಟರ್ ಸ್ಟ್ರೋಕ್’ ಎಂದು ವ್ಯಂಗ್ಯವಾಡಿದೆ.
‘ಮಾಂಸ, ಮೊಸರು, ತುಪ್ಪ, ಗೋಧಿ ಹಿಟ್ಟು ಮುಂತಾದ ಅಗತ್ಯ ಆಹಾರಗಳ ಜೊತೆಗೆ ಸಾವಯವ ಗೊಬ್ಬರದ ಮೇಲೂ ಶೇ 5 ಜಿಎಸ್ಟಿ ಹೇರಲಾಗಿದೆ. ಬೆಲೆ ಏರಿಕೆಯಿಂದ ಬಸವಳಿದಿರುವ ಬಡ, ಮಧ್ಯಮ ವರ್ಗ, ರೈತರನ್ನು ಮುಗಿಸಲು ಮೋದಿ ಸರ್ಕಾರ ಹೊರಟಿದೆ’ ಎಂದು ಆರೋಪಿಸಿದೆ.
‘ಅಚ್ಛೇದಿನ್ ಹೆಸರಲ್ಲಿ ಬಡಜನರ ಬದುಕನ್ನು ಬಿಜೆಪಿ ಬರ್ಬರವಾಗಿಸಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.