ADVERTISEMENT

ಅತಿಥಿ ಉಪನ್ಯಾಸಕರು ಮತ್ತೆ ಅತಂತ್ರ

ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಕರ್ತವ್ಯದಿಂದ ಬಿಡುಗಡೆಗೆ ಸುತ್ತೋಲೆ

ಚಂದ್ರಹಾಸ ಹಿರೇಮಳಲಿ
Published 30 ಡಿಸೆಂಬರ್ 2022, 0:00 IST
Last Updated 30 ಡಿಸೆಂಬರ್ 2022, 0:00 IST
   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಡಿಸೆಂಬರ್‌ ಅಂತ್ಯದ ಒಳಗೆ ಕರ್ತವ್ಯದಿಂದ ಬಿಡುಗಡೆ ಮಾಡಲು ಸರ್ಕಾರ ಹೊರಡಿಸಿದ ಸುತ್ತೋಲೆಗೆ ಆಕ್ರೋಶ ವ್ಯಕ್ತವಾಗಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂಸೇವಾಂಕ ದೊರಕದೆ, ಸೇವಾಭದ್ರತೆ ಇಲ್ಲದೆ ಉದ್ಯೋಗ ಖಾತ್ರಿ, ಹಣ್ಣು, ತರಕಾರಿ ಮಾರಾಟ ಮತ್ತಿತರ ಅರೆಕಾಲಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅತಿಥಿ ಉಪನ್ಯಾಸಕರಿಗೆಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲೇ ಬಿಡುಗಡೆಗೆ ಸುತ್ತೋಲೆ ಹೊರಡಿಸಿರುವುದು ಮತ್ತಷ್ಟು ಸಂಕಷ್ಟ ತಂದಿದೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 15 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದರು. ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದ ಅವರು ಸೇವಾ ಭದ್ರತೆ, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ, ದಶಕದಿಂದ ಹೋರಾಟ ನಡೆಸುತ್ತಿದ್ದರು. ಸರ್ಕಾರ ವರ್ಷದ ಹಿಂದೆ ಅತಿಥಿ ಉಪನ್ಯಾಸಕರ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಿ, ಗೌರವಧನ ಹೆಚ್ಚಳದ ನೆಪದಲ್ಲಿ ಉಪನ್ಯಾಸದ ಅವಧಿಯನ್ನು ವಾರಕ್ಕೆ ಎಂಟು ಗಂಟೆಗಳಿಂದ 15 ಗಂಟೆಗಳಿಗೆಹೆಚ್ಚಿಸಿತು.

ADVERTISEMENT

430

ರಾಜ್ಯದ ಪದವಿ ಕಾಲೇಜುಗಳು

3.5ಲಕ್ಷ

ಪದವಿ ಕಾಲೇಜು ವಿದ್ಯಾರ್ಥಿಗಳು

6,500

ಪ್ರಸ್ತುತ ಇರುವ ಕಾಯಂ ಅಧ್ಯಾಪಕರು

9,461

ಅತಿಥಿ ಉಪನ್ಯಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.