ADVERTISEMENT

ಮಂಡ್ಯದವರನ್ನು ತುಚ್ಚವಾಗಿ ಕಂಡ ಬಿಎಸ್‌ವೈ ಇಂದು ಅವರ ಕಾಲ ಬಳಿ: ಎಚ್‌ಡಿಕೆ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 2:04 IST
Last Updated 26 ನವೆಂಬರ್ 2019, 2:04 IST
   

ಬೆಂಗಳೂರು: ‘ಬಿಜೆಪಿ ಮಂಡ್ಯ ಜನರನ್ನು ತುಚ್ಛವಾಗಿ ಕಂಡಿತ್ತು. ಇಂದು ರಾಜಕೀಯಕ್ಕಾಗಿ ಬಿಜೆಪಿ ಮಂಡ್ಯ ಜನರ ಕಾಲ ಬಳಿ ಬಿದ್ದಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬೂಕನಕೆರೆ ನನ್ನ ಜನ್ನಭೂಮಿ, ಕರ್ಮಭೂಮಿ ಎಂದು ಬರೆದುಕೊಟ್ಟ ಭಾಷಣವನ್ನು ಮಂಡ್ಯದಲ್ಲಿ ನಿಂತು ಯಡಿಯೂರಪ್ಪ ಅವರು ಹೇಳಿದ್ದು ಕೇಳಿ ನನಗೆ ತೀವ್ರ ಆಶ್ಚರ್ಯವಾಯ್ತು. 2018ರ ನನ್ನ ಬಜೆಟ್ನಲ್ಲಿ ಮಂಡ್ಯಕ್ಕೆ ನ್ಯಾಯವಾಗಿ ಅನುದಾನ ಕೊಟ್ಟದ್ದಕ್ಕೆ ನನ್ನನ್ನು 'ಮಂಡ್ಯದ ಸಿಎಂ' 'ಇದು ಮಂಡ್ಯ ಬಜೆಟ್' ಅಂದವರು ಇವರೇ ಅಲ್ಲವೇ? ರಾಜಕೀಯಕ್ಕಾಗಿ ಎಂಥ ಬೂಟಾಟಿಕೆ?

ಮಂಡ್ಯ ಜನರನ್ನು ಬಿಜೆಪಿ ತುಚ್ಛವಾಗಿ ಕಂಡಿತ್ತು. ಮಂಡ್ಯದ ಜನರನ್ನು ಮೂರನೇ ದರ್ಜೆಯವರಾಗಿ ಕಂಡಿದ್ದು ಬಿಜೆಪಿ. ಆದರೆ ಇಂದು ರಾಜಕೀಯಕ್ಕಾಗಿ ಮಂಡ್ಯ ಜನರ ಕಾಲ ಬಳಿ ಬಿದ್ದಿದೆ. ಎಂಥ ವಿಪರ್ಯಾಸ. ಯಡಿಯೂರಪ್ಪನವರೇ ಬಿಡಿ ನಿಮ್ಮ ಡೋಂಗಿತನವನ್ನು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.