ADVERTISEMENT

ಕನಕ ಜಯಂತಿ ರಜೆ ರದ್ದು ಇಲ್ಲ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 20:13 IST
Last Updated 12 ನವೆಂಬರ್ 2019, 20:13 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ    

ಬೆಂಗಳೂರು:ಕನಕದಾಸ ಜಯಂತಿ ಪ್ರಯುಕ್ತ ಇರುವ ರಜೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿಲ್ಲ. ಕನಕ ಜಯಂತಿ ಆಚರಣೆ ಮಾಡಲಾಗುವುದು. ಆ ದಿನ ಸರ್ಕಾರಿ ರಜೆ ಇದೆ ಎಂದುಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

‘ಇದೇ 15ರಂದು ಕನಕ ಜಯಂತಿ ಆಚರಿಸಲಾಗುವುದು. ರಜೆ ಬಗ್ಗೆ ಯಾವುದೇ ಖಾಸಗಿ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳು ಬೇರೆ ನಿರ್ಧಾರ ಕೈಗೊಂಡಿದ್ದರೆ, ಅದು ಆಯಾ ಸಂಸ್ಥೆಯ ನಿರ್ಧಾರವಾಗಿರುತ್ತದೆ. ಈ ಸಂಬಂಧ ಸರ್ಕಾರ ಯಾವುದೇ ಆದೇಶ ಅಥವಾ ಸೂಚನೆ ಹೊರಡಿಸಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT