ADVERTISEMENT

ಸ್ಯಾಂಟ್ರೊ ರವಿ, ಕುಮಾರಸ್ವಾಮಿ ಸಂಬಂಧ ಯಾವ ರೀತಿಯದ್ದು ತಿಳಿಯಬೇಕಿದೆ: ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 12:51 IST
Last Updated 7 ಜನವರಿ 2023, 12:51 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಶಿವಮೊಗ್ಗ: 'ಸ್ಯಾಂಟ್ರೊ ರವಿ ಬಗ್ಗೆ ಮೈಸೂರು ಠಾಣೆಯಲ್ಲಿ ಒಂದಷ್ಟು ಕೇಸ್‌ಗಳಿವೆ. ಈ ಹಿನ್ನೆಲೆಯಲ್ಲಿ ಆತನ ಕೆಲಸ, ಚಟುವಟಿಕೆ ಬಗ್ಗೆ ತನಿಖೆಗೆ ಅಲ್ಲಿನ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿರುವೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಾಂಟ್ರೊ ರವಿ ವಿರುದ್ಧ ಯಾರೆಲ್ಲ ದೂರು ನೀಡಿದ್ದಾರೆ ಎಂಬುದರ ಬಗ್ಗೆ ಸವಿಸ್ತಾರ ತನಿಖೆ ಮಾಡಲು ತಿಳಿಸಿರುವೆ. ರವಿ ಏನೆಲ್ಲ ಮೋಸ ಮಾಡಿದ್ದಾನೆ ಅದರ ಮಾಹಿತಿ ಪಡೆಯಬೇಕಿದೆ. ಈ ಹಿಂದೆ ಆತನ ಮೇಲೆ ಗೂಂಡಾ ಕೇಸ್ ಕೂಡ ಹಾಕಲಾಗಿತ್ತು. ಹೀಗಾಗಿ ತಕ್ಷಣ ಆತನ ಮೇಲೆ ಕ್ರಮಕ್ಕೆ ಸೂಚನೆ ಕೊಟ್ಟಿರುವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

'ಸ್ಯಾಂಟ್ರೊ ರವಿ ಬಗ್ಗೆ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಬಳಿ ತುಂಬಾ ಮಾಹಿತಿ ಇದೆ. ರವಿಯದ್ದೂ ಕುಮಾರಸ್ವಾಮಿ ಜೊತೆ ಅದ್ಯಾವ ರೀತಿ ಸಂಬಂಧ ಇದೆ ಎನ್ನುವುದು ಗೊತ್ತಾಗಬೇಕಿದೆ. ಕುಮಾರಸ್ವಾಮಿ ಅವರಿಗೆ ಮಾತ್ರ ಫೋಟೊ, ಆಡಿಯೊ ಹೇಗೆ ಸಿಗುತ್ತದೆ. ಇದು ಆಲೋಚನೆ ಮಾಡಬೇಕಾದ ಸಂಗತಿ. ಅವರ ಬಳಿ ಇನ್ನಷ್ಟು ಮಾಹಿತಿ ಇದ್ದರೆ ತನಿಖಾಧಿಕಾರಿಗೆ ಕೊಟ್ಟು ಸಹಕರಿಸಬೇಕು. ತನಿಖೆಗೂ ಅನುಕೂಲ ಆಗುತ್ತೆ. ಆತ ದುಷ್ಟ ಆಗಿದ್ದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.