ADVERTISEMENT

ಐಎಂಎ ಮಾಲೀಕನಿಂದ ಮತ್ತೊಂದು ಆಡಿಯೊ ಬಿಡುಗಡೆ | ಜೀವಂತ ಇದ್ದೇನೆ,ಹಣ ವಾಪಸ್‌ ಕೊಡುವೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 12:16 IST
Last Updated 11 ಜೂನ್ 2019, 12:16 IST
   

ಬೆಂಗಳೂರು: ನೂರಾರು ಕೋಟಿ ವಂಚಿಸಿ ನಾಪತ್ತೆಯಾಗಿರುವ ಐಎಂಎ ಕಂಪನಿ ಮಾಲೀಕ ಮೊಹಮ್ಮದ ಮನ್ಸೂರ್ ಖಾನ್ ಮತ್ತೊಂದು ಆಡಿಯೊ ಬಿಡುಗಡೆ ಮಾಡಿದ್ದಾನೆ. ತಾನು ಬೆಂಗಳೂರಲ್ಲಿ ಜೀವಂತ ಇರುವುದಾಗಿ ಹೇಳಿಕೆ ನೀಡಿದ್ದಾನೆ.

'ನನ್ನ ಹಿಂದೆ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ, ನಾನು ಸಾಯುವುದಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ. ನಾನು ತೆಗೆದುಕೊಂಡಿರುವ ನ್ಯಾಯವಾದ ದುಡ್ಡು ಎಲ್ಲರಿಗೂ ವಾಪಸ್ ಸಿಗಲಿದೆ. ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ಹಾಗೂ ರಾಹಿಲ್ ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸುತ್ತಿದ್ದಾರೆ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನುಆಭರಣ, ವಜ್ರ, ಆಸ್ಪತ್ರೆ,ಹಾಗೂ ರಿಯಲ್ ಎಸ್ಟೆಟ್ ನಲ್ಲಿ ಹೂಡಿಕೆ ಮಾಡಿದ್ದೇನೆ' ಎಂದು ಆಡಿಯೊದಲ್ಲಿ ಹೇಳಿದ್ದಾನೆ.

'ದೊಡ್ಡ ದೊಡ್ಡವರ ಕೈವಾಡ ಇದೆ,ರಾಹೀಲ್ ಕೈಯಲ್ಲಿ ನನ್ನ ಎಲ್ಲ ಆಭರಣ ಹಾಗೂ ವಜ್ರ ಕೊಟ್ಟಿದ್ದೇನೆ. ಇಂದು ಸಾಯಂಕಾಲ 5 ಗಂಟೆಗೆ ಸಮದ್ ಹಾಲ್‌ನಲ್ಲಿ ಮೀಟಿಂಗ್ ಕರೆದಿದ್ದೇನೆ. ರಾಹೀಲ್ ಜೊತೆ ಎಲ್ಲರ ಜೊತೆ ಮಾತನಾಡಿ,15ನೆ ತಾರೀಕಿಗೆ ಎಲ್ಲರ ಹಣ ವಾಪಸ್ ಮಾಡುತ್ತೇನೆ. ಮೊದಲು ಕಡಿಮೆ ಮೊತ್ತದವರಿಗೆ ನಂತರ ಮದ್ಯಮ, ತದನಂತರ ದೊಡ್ಡ ಮೊತ್ತದವರಿಗೆ ಪಾವತಿಸುತ್ತೇನೆ' ಎಂದು ಸಹ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.