ADVERTISEMENT

ಮಂಡ್ಯದಿಂದ ಆರಂಭವಾದ ಜೆಡಿಎಸ್ ಪತನದ ಓಟ ಇನ್ನೂ ಮುಂದುವರೆದಿದೆ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 8:09 IST
Last Updated 19 ಅಕ್ಟೋಬರ್ 2020, 8:09 IST
ಅಡಗೂರು ಎಚ್. ವಿಶ್ವನಾಥ್
ಅಡಗೂರು ಎಚ್. ವಿಶ್ವನಾಥ್   

ಹುಣಸೂರು: ‘ಉಪ ಚುನಾವಣೆ ಯಲ್ಲಿ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಗೆಲ್ಲುವುದು ಖಚಿತ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಶಿರಾ ಕ್ಷೇತ್ರ ಉಳಿಸಿಕೊಳ್ಳಲು ಅಲ್ಪಸಂಖ್ಯಾತರ ಓಲೈಕೆ ಮಾಡಿ ದಿಕ್ಕು ತಪ್ಪಿಸುವ ಆಟವಾಡುತ್ತಿದ್ದಾರೆ’ ಎಂದು ಭಾನುವಾರ ನಗರದಲ್ಲಿ ಆರೋಪಿಸಿದರು.

‘ಮಂಡ್ಯ ಲೋಕಸಭಾ ಚುನಾವಣೆಯಿಂದ ಜೆಡಿಎಸ್ ಪತನ ಆರಂಭವಾಗಿದೆ. ನಂತರದ ಪ್ರತಿ ಚುನಾವಣೆಯಲ್ಲೂ ಪತನದ ಓಟ ಮುಂದುವರೆದಿದೆ. ಇದಕ್ಕೆ ಕಾರ್ಯಕರ್ತರು ಕಾರಣರಲ್ಲ, ಆ ಪಕ್ಷದ ನಾಯಕರು. ಇದನ್ನು ಪ್ರತಿಭಟಿಸಿ ಜೆಡಿಎಸ್‌ನ ಚುನಾಯಿತ ಜನಪ್ರತಿನಿಧಿಗಳು ದಂಗೆ ಎದ್ದು ಹೊರ ಬಂದರು’ ಎಂದು ಹೇಳಿದರು.

ADVERTISEMENT

‘ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರ ಸೋಲಿಗೆ ಮೂಲ ಕಾರಣ ಸಮ್ಮಿಶ್ರ ಸರ್ಕಾರದ ವೇಳೆ ಕುಮಾರಸ್ವಾಮಿ ಕಾರ್ಯಕರ್ತರ ಜೊತೆ ನಡೆದುಕೊಂಡ ರೀತಿ. ಈಗಲೂ ಆ ನೋವು ಕಾರ್ಯಕರ್ತರಿಂದ ಮಾಸಿಲ್ಲ, ಹೀಗಾಗಿ ಇಂದಿಗೂ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಪಕ್ಷದ ಮುಖಂಡರು ಬಂದಿಲ್ಲ’ ಎಂದು ಲೇವಡಿ ಮಾಡಿದರು.

ನಗರ ಘಟಕದ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ನಾಗರಾಜಪ್ಪ, ಎ.ಪಿ.ಸ್ವಾಮಿ, ವಿವೇಕ್, ಗಣಪತಿ, ಕಮಲಾ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.