ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವಜೆಡಿಎಸ್ನ ಇಬ್ಬರು ಶಾಸಕರಹೆಸರು ಮತ್ತು ಫೋಟೊ ಹಾಕಿ ‘ಕೈಲಾಸ ಸಮಾರಾಧನೆ’ ಪತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಕೋಲಾರದ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ ಅವರು ಕೋಮುವಾದಿ ಪಕ್ಷವನ್ನು ಗೆಲ್ಲಿಸಲು ಜೆಡಿಎಸ್ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡಿ ದುಡ್ಡಿಗಾಗಿ ತಮ್ಮ ಮತವನ್ನು ಮಾರಿಕೊಂಡಿದ್ದಾರೆ.ಮತದಾರರ ಪಾಲಿಗೆ ತೀರಿಕೊಂಡಿದ್ದಾರೆ ಎಂದು ಆರೋಪಿಸಿ‘ಕುಮಾರಸ್ವಾಮಿ ಫಾರ್ ಸಿಎಂ’ ಫೇಸ್ಬುಕ್ ಪುಟದಲ್ಲಿ ಪೋಸ್ಟ್ಗಳನ್ನು ಹಾಕಲಾಗಿದೆ.
ಈ ಪೋಸ್ಟ್ಗಳನ್ನು ಸಾವಿರಾರು ಮಂದಿಲೈಕ್ ಮಾಡಿದ್ದು, ತಮ್ಮ ಖಾತೆಗಳಲ್ಲಿಯೂ ಹಂಚಿಕೊಂಡಿದ್ದಾರೆ. ಪೋಸ್ಟ್ಗಳಿಗೆಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇವನ್ನೂ ಓದಿ..
*ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ: ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ
*ಕೋಲಾರ: ಶಾಸಕ ಶ್ರೀನಿವಾಸಗೌಡರ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
*ಜೆಡಿಎಸ್ಗೆ ಕುತ್ತು ತಂದ ಇಬ್ಬರು 'ಶ್ರೀನಿವಾಸರು': ಎಚ್ಡಿಕೆ
*ಗಂಡಸಾದರೆ ನನ್ನ ಎದುರು ಗೆಲ್ಲಲಿ: ಎಚ್ಡಿಕೆ ವಿರುದ್ಧತೊಡೆ ತಟ್ಟಿದ ಶ್ರೀನಿವಾಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.